More

    ವಿವಿಧ ಸಂಘಟನೆಗಳಿಂದ ಪತಿಭಟನೆ

    ಕೊಡಗು : ರಾಜ್ಯ ಸರ್ಕಾರ ಮಾ.12ರಂದು ಜಾರಿಗೆ ತಂದಿರುವ ಭೂ-ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರಪೇಟೆ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.


    • ಕೊಡಗು ಜಿಲ್ಲೆ ಭೂ-ಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿ, ದಲಿತ, ಆದಿವಾಸಿ, ಕೃಷಿ, ಕಾರ್ಮಿಕ, ಮೂಲನಿವಾಸಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಸುಶೀಲಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

    • ಜಿಲ್ಲೆಯಲ್ಲಿ ಕಾರ್ಪೋರೇಟ್‌ಗಳು, ಭೂಮಾಲೀಕರು ಅನಧಿಕೃತವಾಗಿ ಮಾಡಿಕೊಂಡಿರುವ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು. ಜಿಲ್ಲೆಯ ಎಲ್ಲ ಭೂರಹಿತ ಕೃಷಿ ಕಾರ್ಮಿಕರು, ದಲಿತ ಆದಿವಾಸಿ ಕಡುಬಡವರಿಗೆ ತಕ್ಷಣ ನಿವೇಶನ ಮತ್ತು ಭೂಮಿ ವಿತರಿಸಬೇಕು. ಈಗಾಗಲೇ ಫಾರ್ಮ್ 57ರಲ್ಲಿ ಸಲ್ಲಿಕೆಯಾಗಿರುವ ಬಡವರ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಉಳಿದವರಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಮುಂದುವರಿಸಬೇಕು. ಜಿಲ್ಲೆಯಲ್ಲಿ ಎಲ್ಲ ಜಾತಿಯ ಬಡವರು, ಕೃಷಿ ಕಾರ್ಮಿಕರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ 5 ಎಕರೆ ಜಾಗಕ್ಕೆ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದರು.

    • ಕೊಡಗಿನ ಶ್ರೀಮಂತ ಭೂಮಾಲೀಕರ ತೋಟಗಳಲ್ಲಿ ಇಂದಿಗೂ ಆದಿವಾಸಿಗಳು ಜೀತದಾಳಾಗಿ ದುಡಿಯುತ್ತಿದ್ದಾರೆ. ಶವವನ್ನು ಹೂಳಲು, ಮನೆ ಕಟ್ಟಿಕೊಳ್ಳಲು ಸರ್ಕಾರಿ ಜಾಗ ಸಿಗುತ್ತಿಲ್ಲ. ಇದ್ದ ಸರ್ಕಾರಿ ಭೂಮಿಯನ್ನೆಲ್ಲ ಆರ್ಥಿಕ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಸರ್ಕಾರ ಅಂತಹವರಿಗೆ ಸರ್ಕಾರ ಭೂಮಿ ಮಾರಾಟ ಮಾಡಲು ಹೊರಟಿದೆ. ಇದು ಅನ್ಯಾಯ ಎಂದು ದೂರಿದರು.
      • ಪ್ರತಿಭಟನೆಯಲ್ಲಿ ಐಕ್ಯ ಸಮಿತಿ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಪದಾಧಿಕಾರಿಗಳಾದ ಜಯಪ್ಪ ಹಾನಗಲ್, ರವಿ ಶಾಂತಳ್ಳಿ, ಶಿವರಾಜ್ ಗಣಗೂರು, ಶೋಭಾ, ಸೋನಿ, ರಾಣಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts