More

    ದಂಬಳದ ಚಿತ್ತಮ್ಮದೇವರ ಗುಗ್ಗರಿ ಹಬ್ಬ

    ಪರಶುರಾಮಪುರ: ಸಮೀಪದ ಟಿ.ಎನ್.ಕೋಟೆ ಗೊಲ್ಲರಹಟ್ಟಿಯಲ್ಲಿ ೆ.15ರಿಂದ 19ರ ವರೆಗೆ ಶ್ರೀವೀರ ಕರಿಯಣ್ಣಸ್ವಾಮಿ ಮತ್ತು ದಂಬಳದ ಚಿತ್ತಮ್ಮದೇವರ ಗುಗ್ಗರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

    ಫೆ.15ಕ್ಕೆ ಕೋಣನಗೌಡರಿಂದ ದೇವರಿಗೆ ಮೊದಲ ಪೂಜೆ ನಂತರ ಎರಡು ದೇವರುಗಳಿಗೆ ಕಂಕಣ ಕಟ್ಟುವ ಶಾಸ್ತ್ರ ನಡೆಯಲಿದೆ. 16 ರ ಬೆಳಗ್ಗೆ ಕೋಣನ ಗೌಡರಿಂದ ಅಕ್ಕಿ ಅಳೆಯುವ ಶಾಸ, ಮಧ್ಯಾಹ್ನ ಹೊಸಕೆರೆ ದಿನ್ನೆಯಲ್ಲಿರುವ ದಂಬಳದ ಚಿತ್ತಮ್ಮದೇವಿ ದೇವಸ್ಥಾನಕ್ಕೆ ದೇವರುಗಳನ್ನು ಕೊಂಡೊಯ್ದು ಪ್ರತಿಷ್ಠಾಪಿಸಲಾಗುತ್ತದೆ.

    17ರ ಬೆಳಗ್ಗೆ ಉತ್ಸವ ಮೂರ್ತಿಗಳಿಗೆ ಗಂಗಾಪೂಜೆ, ನಂತರ ಹೊಸಕೆರೆ ದಿನ್ನೆಯಲ್ಲಿ ಶ್ರೀ ದಂಬಳದ ಚಿತ್ತಮ್ಮ ಮತ್ತು ಕರಿಯಣ್ಣಸ್ವಾಮಿಗೆ ಪೂಜೆ, ಉಂಡೆ-ಮಂಡೆ ಕಾರ್ಯಕ್ರಮ, ಸಂಜೆ ಟಿ.ಎನ್.ಕೋಟೆ ಹಿಂದಿರುಗುವ ಕಾರ್ಯಕ್ರಮ ಇರುತ್ತದೆ.

    18ರಂದು ದೇವರ ಉತ್ಸವ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಮಾ.19ಕ್ಕೆ ಮಹಾಮಂಗಳಾರತಿ ಸೇವೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts