More

    ವೇದಾವತಿಗೆ ರೈತರಿಂದ ಬಾಗಿನ ಅರ್ಪಣೆ

    ಪರಶುರಾಮಪುರ: ರಾಜ್ಯ ಸರ್ಕಾರ ತಾಲೂಕಿನ ರೈತರ ಮನವಿಗೆ ಸ್ಪಂದಿಸಿ ವೇದಾವತಿ ನದಿಗೆ ವಿವಿ ಸಾಗರದ ನೀರು ಹರಿಸುವ ಮೂಲಕ ದೊಡ್ಡ ಉಪಕಾರ ಮಾಡಿದೆ ಎಂದು ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.

    ಸಮೀಪದ ಬೊಂಬೇರಹಳ್ಳಿ ಬ್ಯಾರೇಜ್ ಬಳಿ ಶುಕ್ರವಾರ ರೈತ ಸಂಘದಿಂದ ವೇದಾವತಿ ನದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು.

    ವೇದಾವತಿ ವಿವಿ ಸಾಗರ ನೀರು ಹರಿದಿದ್ದರಿಂದ ಇಲ್ಲಿನ ಜೀವಚರಗಳಿಗೆ ಜೀವ ಬಂದಂತಾಗಿದೆ. ಜನ-ಜಾನುವಾರು, ಕೃಷಿ ಚಟುವಟಿಕೆ. ಅಂತರ್ಜಲ ವೃದ್ಧಿಗೆ ತುಂಬಾ ಅನುಕೂಲವಾಗಿದೆ. ಈ ಕಾರ್ಯ ಸಾಕಾರಕ್ಕೆ ಶಾಸಕ ಟಿ.ರಘುಮೂರ್ತಿ ಶ್ರಮ ಶ್ಲಾಘನಾರ್ಹ ಎಂದರು.

    ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಡಿ ವಿವಿ ಸಾಗರಕ್ಕೆ ನೀರು ಹರಿಸುವ ಚಿಂತನೆ ನಡೆದಿದೆ. ಇದು ಸಾಧ್ಯವಾದರೆ ಜಿಲ್ಲೆಯ ಎಲ್ಲ ತಾಲೂಕುಗಳ ಜನ-ಜಾನುವಾರುಗಳಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

    ವಿವಿಧ ಹಳ್ಳಿಗಳ ರೈತರು ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ನದಿಪಾತ್ರದ ಸೂರನಹಳ್ಳಿ, ಚೌಳೂರು, ಪರಶುರಾಮಪುರ, ಜುಂಜರಗುಂಟೆ ಹಾಗೂ ಚಟ್ಟೇಕಂಬ ಗ್ರಾಮಗಳಿಗೆ ಬೈಕ್ ಮೂಲಕ ತೆರಳಿ ನೀರು ಹರಿವಿನ ಪ್ರಮಾಣ ಮತ್ತು ಅಲ್ಲಿನ ಜನರ ಸ್ಥಿತಿಗತಿ ಅವಲೋಕಿಸಲಾಯಿತು.

    ಸಂಘದ ಕಾರ್ಯದರ್ಶಿ ಆರ್.ಬಸವರಾಜು, ರೈತರಾದ ಎಸ್.ನಾಗರಾಜು, ಎಚ್.ಮಲ್ಲಿಕಾರ್ಜುನ, ತಿಪ್ಪೇಸ್ವಾಮಿಗೌಡ, ಅಶ್ವತ್ಥರೆಡ್ಡಿ, ಮಹಾಲಿಂಗಪ್ಪ, ರಾಜಣ್ಣ, ತಿಮ್ಮಯ್ಯ, ಕಾಟಯ್ಯ, ರಾಜಣ್ಣ ವಿವಿಧ ಹಳ್ಳಿಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts