More

    ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

    ಪರಶುರಾಮಪುರ: ಆಂಧ್ರ ಗಡಿಭಾಗದ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

    ಸಮೀಪದ ಸಿದ್ದೇಶ್ವರನದುರ್ಗ ಗ್ರಾಪಂ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಆಹಾರದ ಕಿಟ್‌ಗಳ ವಿತರಣೆ ಮಾಡಿ ಮಾತನಾಡಿದರು.

    ಸಿದ್ದೇಶ್ವರನದುರ್ಗ-ಕ್ಯಾದಿಗುಂಟೆ ಅವಳಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗಿದೆ. ಎರಡು ಅಂಗನವಾಡಿ ಕಟ್ಟಡಗಳ ನಿರ್ಮಾಣ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಸಿಸಿ ರಸ್ತೆಗಳ ನಿರ್ಮಾಣ ಮಾಡಲಾಗುವುದು ಎಂದರು.

    ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ನಾಗಮಣಿ, ಸದಸ್ಯರಾದ ರಂಗಯ್ಯ, ರಾಘವೇಂದ್ರ, ಶಶಿಧರ, ನಾಗರಾಜು, ಚಿತ್ತಮ್ಮ, ರಾಮಣ್ಣ, ದೇವರಾಜು, ಮಾಜಿ ಅಧ್ಯಕ್ಷೆ ಲತಾ, ಎಪಿಎಂಸಿ ಮಾಜಿ ಸದಸ್ಯ ಟಿ.ಆರ್.ಹನುಮಂತರಾಯ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಚನ್ನಕೇಶವ, ಜಿಪಂ ನಾಮನಿರ್ದೇಶಿತ ಸದಸ್ಯ ಜಯವೀರಾಚಾರಿ, ಪಿಡಿಒ ದೇವರಾಜು, ಆರ್‌ಐ ಹಿರಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts