ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಬಂದೇನವಾಜ್ ಲಾಲ್ ಸಾಬ್ ಕಟಗರರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಫಸಲು ಭಾನುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ನೆಲಕ್ಕುರುಳಿದೆ. ಪಾಮನಕಲ್ಲೂರಿನಲ್ಲಿ ರಾತ್ರಿ ರಸ್ತೆ ಮೇಲೆ ಮರ ಉರುಳಿದ್ದರಿಂದ ವಾಹನ ಸವಾರರು ಪರದಾಡಿದರು. ಸಾರ್ವಜನಿಕರ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು ಜೆಸಿಬಿ ಮೂಲಕ ಮರ ತೆರವುಗೊಳಿಸಿದರು. ವಟಗಲ್, ಹಣಗಿ ಹಾಗೂ ಇತರೆಡೆ ಮರಗಳು ಉರುಳಿವೆ.