ನವದೆಹಲಿ: ಗ್ರೆಟಾ ಥಬ್ಬರ್ಗ್ ಟೂಲ್ಕಿಟ್ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಪರಿಸರ ವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂಲ್ಕಿಟ್ ಕೆಲ ಸಾಲುಗಳನ್ನು ಎಡಿಟ್ ಮಾಡಿಕೊಟ್ಟಿದ್ದಾಗಿ ಸ್ವತಃ ದಿಶಾ ಒಪ್ಪಿಕೊಂಡಿದ್ದಾಳೆ. ಆದರೆ ಅದಾಗಲೇ ದೇಶ ವಿದೇಶಗಳಲ್ಲಿ ದಿಶಾ ಪರ ವಿರೋಧದ ಹೋರಾಟಗಳು ಆರಂಭವಾಗಿಬಿಟ್ಟಿವೆ. ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಈ ವಿಚಾರದಲ್ಲಿ ಬಾಯಿ ತೆರೆದಿದ್ದಾರೆ.
ಮೋದಿ ಮತ್ತು ಆರ್ಎಸ್ಎಸ್ಗೆ ಅವರ ವಿರುದ್ಧ ಮಾತನಾಡುವವರನ್ನು ಬಾಯಿ ಮುಚ್ಚಿಸುವದೇ ಕೆಲಸ. ಇದೀಗ ಟ್ವಿಟ್ಟರ್ ಟೂಲ್ಕಿಟ್ ಪ್ರಕರಣದಲ್ಲಿ ದಿಶಾ ರವಿಯನ್ನು ಅದೇ ರೀತಿ ಬಾಯಿ ಮುಚ್ಚಿಸುವ ಸಲುವಾಗಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಆಡಳಿತ ಪಕ್ಷ ಟ್ವಿಟ್ಟರ್ನಲ್ಲಿ ದೂರಿದೆ.
ರೈತರನ್ನು ಕೆರಳಿಸುವ ಉದ್ದೇಶದಿಂದ ಟೂಲ್ಕಿಟ್ ಬಿಡುಗಡೆ ಮಾಡಲಾಗಿತ್ತು. ಟೂಲ್ಕಿಟ್ ಸೃಷ್ಠಿಕರ್ತರ ಹಿಂದೆ ಬಿದ್ದ ದೆಹಲಿ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿ ದಿಶಾಳನ್ನು ಶನಿವಾರದಂದು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ಅದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಕೀಲೆ ನಿಕಿತಾ ಹಾಗೂ ಇನ್ನೊಬ್ಬ ಕಾರ್ಯಕರ್ತನಿಗೂ ಜಾಮೀನು ರಹಿತ ವಾರಂಟ್ ನೀಡಲಾಗಿದೆ. (ಏಜೆನ್ಸೀಸ್)
ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ಸೋನು ಸೂದ್; ಈ ಬಾರಿ ಅವರು ಮಾಡಿರುವ ಕೆಲಸ ಹೇಗಿದೆ ನೋಡಿ…
ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್ ಮಾಡಲು ಯತ್ನಿಸಿದ ಸಚಿವ! ಕೇಸ್ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್!