ನವದೆಹಲಿ: ಭಾರತದ ತಂಡದ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ನಾವು ಪಂದ್ಯ ಗೆದ್ದಾಗಲೆಲ್ಲಾ ಪಂದ್ಯದ ನಂತರ ಭಾರತದ ಆಟಗಾರರು ನಮ್ಮ ಬಳಿ ಕ್ಷಮೆ ಕೋರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಕರೊನಾದಿಂದ ಗುಣಮುಖರಾದ ಬಳಿಕ ಮೊದಲ ಬಾರಿಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿ, ನಾನು ಯಾವಾಗಲು ಟೀಂ ಇಂಡಿಯಾ ವಿರುದ್ಧ ಆಡುವುದನ್ನು ಎಂಜಾಯ್ ಮಾಡುತ್ತಿದೆ. ನಾವು ನಿಜಕ್ಕೂ ಯೋಗ್ಯವಾಗಿಯೇ ಇಂಡಿಯಾವನ್ನು ಸೋಲಿಸಿದ್ದೇವೆ. ನಾವು ಸಾಕಷ್ಟು ಬಾರಿ ಅವರನ್ನು ಸೋಲಿಸಿದ್ದೇವೆ ಎಂದು ನಂಬಿದ್ದೇನೆ. ಸೋತಾಗಲೆಲ್ಲಾ ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರು ನಮ್ಮ ಬಳಿ ಕ್ಷಮೆ ಕೋರುತ್ತಿದ್ದರು ಎಂದಿದ್ದಾರೆ.
ನಾನು ಇಂಡಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡುವಾಗಲೆಲ್ಲಾ ತುಂಬಾ ಒತ್ತಡವಿದ್ದರೂ ಸಹ ಎಂಜಾಯ್ ಮಾಡಿದ್ದೇನೆ. ಅವರದು ಒಳ್ಳೆಯ ಹಾಗೂ ದೊಡ್ಡ ತಂಡಗಳಾಗಿದ್ದು, ಅವರದ್ದೇ ಪರಿಸ್ಥಿತಿಗಳಲ್ಲಿ ಹೋಗಿ ಪ್ರದರ್ಶನ ನೀಡುವುದು ದೊಡ್ಡ ವಿಷಯವೇ ಸರಿ ಎಂದು ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಲಾಕ್ಡೌನ್ಗೆ ಉತ್ತಮ ಬೆಂಬಲ: ಅನಗತ್ಯ ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿರೋ ಖಾಕಿ ಪಡೆ
ಭಾರತದ ವಿರುದ್ಧ 141 ರನ್ ಬಾರಿಸಿದ್ದ ನನ್ನ ಜೀವನದ ಅವಿಸ್ಮರಣೀಯ ಇನ್ನಿಂಗ್ಸ್ ಆಗಿದೆ. ಅದೂ ಭಾರತ ನೆಲದಲ್ಲೇ ಹೆಚ್ಚಿನ ರನ್ ಗಳಿಸಿದ್ದೆ. ಅಂದು ನಾನು ಇಂಡಿಯಾ ಪ್ರವಾಸಕ್ಕೆ ಆಯ್ಕೆಯಾಗಿರಲಿಲ್ಲ. ಆ ಸಮಯದಲ್ಲಿ ವಾಸಿಂ ಭಾಯ್ ಮತ್ತು ಮುಖ್ಯ ಆಯ್ಕೆಗಾರ ನನಗೆ ಬೆಂಬಲವಾಗಿ ನಿಂತರು. ಅದು ಕಷ್ಟಕರವಾದ ಪ್ರವಾಸವೂ ಆಗಿತ್ತು ಮತ್ತು ಇನ್ನಿಂಗ್ ಬಹಳ ಮುಖ್ಯವಾಗಿತ್ತು. ಇಂಹತ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ಅವಿಸ್ಮರಣೀಯ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು