More

    ಪಡುಕರೆ ಕಡಲ ಕಿನಾರೆಯಲ್ಲಿ ಕಡಲಾಮೆ ರಕ್ಷಣೆ

    ಕೋಟ: ಕೋಟ ಮಣೂರು ಪಡುಕರೆ ಕಡಲ ಕಿನಾರೆಯಲ್ಲಿ ಶುಕ್ರವಾರ ಹಳೇ ಬಲೆಗೆ ಸಿಕ್ಕಿಹಾಕಿಕೊಂಡು ದಡ ಸೇರಿದ ಎರಡು ಭಾರಿ ಗಾತ್ರದ ಕಡಲಾಮೆಗಳನ್ನು ಮಣೂರು ಪಡುಕರೆ ಶ್ರೀರಾಮ್ ಫ್ರೆಂಡ್ಸ್ ಯುವಕರು ರಕ್ಷಿಸಿ ಮರಳಿ ಕಡಲಿಗೆ ಬಿಟ್ಟಿದ್ದಾರೆ.
    ಸಮುದ್ರದಲ್ಲಿ ಬೋಟ್‌ಗಳ ಕಡಿದುಹೊದ ಬಲೆಗಳಿಗೆ ಸಿಲುಕಿ ಈ ಕಡಲಾಮೆಗಳು ಶುಕ್ರವಾರ ದಡ ಸೇರಿದ್ದು, ಸ್ಥಳೀಯರು ಶ್ರೀರಾಮ್ ಫ್ರೆಂಡ್ಸ್ ಸದಸ್ಯರ ಗಮನಕ್ಕೆ ತಂದಿದ್ದರು. ಯುವಕರು ಶೀಘ್ರ ಅದನ್ನು ತೆರವುಗೊಳಿಸಿ ಸಮುದ್ರಕ್ಕೆ ಮರಳಿಸಿದ್ದಾರೆ. ಶ್ರೀರಾಮ್ ಫ್ರೆಂಡ್ಸ್‌ನ ಕಾರ್ತಿಕ್ ಮತ್ತು ನಾಗರಾಜ್ ಆಮೆಗಳನ್ನು ಬಲೆಯಿಂದ ತೆರವುಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts