ನವದೆಹಲಿ: ನಮ್ಮ ರೈತರು ವಿಶಾಲ ಹೃದಯಿಗಳು ನೋಡಿ, ಮಾನವ ಹಕ್ಕುಗಳ ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ತಮ್ಮ ಪ್ರತಿಭಟನೆಯ ವೇಳೆ ಖಂಡಿಸಿದ್ದಾರೆ ಎಂಬರ್ಥದ ಅಭಿಪ್ರಾಯದೊಂದಿಗೆ ತ್ರಿಕ್ರಿ ಬಾರ್ಡರ್ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಗುಂಪೊಂದು ನಕ್ಸಲ್ ಹಿತೈಷಿಗಳು, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ 11 ಸೆಕೆಂಡ್ಗಳ ವಿಡಿಯೋವನ್ನು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಅವರು ಟ್ವೀಟ್ನಲ್ಲಿ ಹೇಳಿರುವುದಿಷ್ಟು – ತ್ರಿಕ್ರಿ ಬಾರ್ಡರ್ನಲ್ಲಿ ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ರೈತರು ಕೂಡ ನಮ್ಮ ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನು ಖಂಡಿಸಿದ್ದಾರೆ. ನಮ್ಮ ರೈತರು ವಿಶಾಲ ಹೃದಯದವರಾಗಿದ್ದು, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ: ಯೂನಿಯನ್ ಲೀಡರ್ಗಳ ಮೇಲೆ ನಂಬಿಕೆ ಇಡಿ, ಮುಷ್ಕರದಿಂದ ಹಿಂದೆ ಸರಿಯಿರಿ: ಡಿಸಿಎಂ ಸವದಿ
At the massive farmers protests at Tikri border, farmers also protest the illegal & malafide detention of our human rights defenders. Clearly, our farmers have large hearts & serious concerns about humanity & democracy 🙏🏾 pic.twitter.com/duCBqZdZik
— Prashant Bhushan (@pbhushan1) December 11, 2020
ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಇದು ರೈತ ಪ್ರತಿಭಟನೆ ಅಲ್ಲ, ಸಿಎಎ ವಿರೋಧಿಸಿದ ಪ್ರತಿಭಟನೆಯ ಇನ್ನೊಂದು ರೂಪ ಎಂದೆಲ್ಲ ಟೀಕಿಸಿದ್ದಾರೆ. ಇಂದು ಬೆಳಗ್ಗೆ 9.52ಕ್ಕೆ ಮಾಡಿರುವ ಈ ಟ್ವೀಟ್ 950ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..
ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್ಡ್ರಾಪ್ !