More

    ನಮ್ಮ ರೈತರು ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನೂ ಖಂಡಿಸಿದ್ದಾರೆ- ಪ್ರಶಾಂತ್ ಭೂಷಣ್ !

    ನವದೆಹಲಿ: ನಮ್ಮ ರೈತರು ವಿಶಾಲ ಹೃದಯಿಗಳು ನೋಡಿ, ಮಾನವ ಹಕ್ಕುಗಳ ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ತಮ್ಮ ಪ್ರತಿಭಟನೆಯ ವೇಳೆ ಖಂಡಿಸಿದ್ದಾರೆ ಎಂಬರ್ಥದ ಅಭಿಪ್ರಾಯದೊಂದಿಗೆ ತ್ರಿಕ್ರಿ ಬಾರ್ಡರ್​ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಗುಂಪೊಂದು ನಕ್ಸಲ್ ಹಿತೈಷಿಗಳು, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ 11 ಸೆಕೆಂಡ್​ಗಳ ವಿಡಿಯೋವನ್ನು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

    ಅವರು ಟ್ವೀಟ್​ನಲ್ಲಿ ಹೇಳಿರುವುದಿಷ್ಟು – ತ್ರಿಕ್ರಿ ಬಾರ್ಡರ್​ನಲ್ಲಿ ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ರೈತರು ಕೂಡ ನಮ್ಮ ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನು ಖಂಡಿಸಿದ್ದಾರೆ. ನಮ್ಮ ರೈತರು ವಿಶಾಲ ಹೃದಯದವರಾಗಿದ್ದು, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

    ಇದನ್ನೂ ಓದಿ: ಯೂನಿಯನ್ ಲೀಡರ್​ಗಳ ಮೇಲೆ ನಂಬಿಕೆ ಇಡಿ, ಮುಷ್ಕರದಿಂದ ಹಿಂದೆ ಸರಿಯಿರಿ: ಡಿಸಿಎಂ ಸವದಿ 

    ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಇದು ರೈತ ಪ್ರತಿಭಟನೆ ಅಲ್ಲ, ಸಿಎಎ ವಿರೋಧಿಸಿದ ಪ್ರತಿಭಟನೆಯ ಇನ್ನೊಂದು ರೂಪ ಎಂದೆಲ್ಲ ಟೀಕಿಸಿದ್ದಾರೆ. ಇಂದು ಬೆಳಗ್ಗೆ 9.52ಕ್ಕೆ ಮಾಡಿರುವ ಈ ಟ್ವೀಟ್ 950ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್​ಡ್ರಾಪ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts