ಕೋಲಾರ: ಜಿಲ್ಲಾ ಪಂಚಾಯತ್ ಕೆಲ ಅಧಿಕಾರಿಗಳು , ಸಿಬ್ಬಂದಿ ಆನ್ಲೈನ್ ಬಿಸಿನೆಸ್ ವ್ಯಾಮೋಹಕ್ಕೆ ಒಳಗಾಗಿ ಲಕ್ಷಾಂತರ ರೂ ಹಣ ಕಳೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ಬೆಳೆಕಿಗೆ ಬಂದಿದೆ.
ಪ್ರಥಮ ದರ್ಜೆ ಹಾಗೂ ಕಚೇರಿ ವ್ಯವಸ್ಥಾಪಕ ಸುಮಾರು ಮಟ್ಟದ ಅಧಿಕಾರಿಗಳು 20 ಲಕ್ಷ ರೂ. ಹಣ ಕಳೆದುಕೊಂಡಿದ್ದು ಕೆಜಿಎಫ್ನ ಸೈಬರ್್ರ ಕೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳನ್ನು ಅನುಸರಿಸಿದ ಗುಮಾಸ್ತರು, ಡಿ ದರ್ಜೆ ನೌಕರರೂ ವಂಚನೆಗೆ ಒಳಗಾಗಿದ್ದಾರೆ.
ಹಣ ದ್ವಿಗುಣಗೊಳಿಸುವ ಆನ್ಲೈನ್ ವಂಚನೆಗೆ ಸಿಕ್ಕ ಸುಮಾರು ನಲವತ್ತು ಅಧಿಕಾರಿ ಮತ್ತು ನೌಕರರು ಮೋಸ ಹೋಗಿದ್ದಾರೆ. ಹಣ ಕಳೆದುಕೊಂಡ 17 ಮಂದಿಯ ಪರವಾಗಿ ಕೆಜಿಎಫ್ ತಾಲೂಕಿನ ಕಾಮಸಮುದ್ರಂನ ರಾಜೇಶ್ ಎಂಬುವರು ಅ.1 ರಂದು ಆನ್ಲೈನ್ http://7-eleven.top/##auth/ register?fuid=170990 ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ.
ಜೂನ್ 8 ರಿಂದ ಆಗಸ್ಟ್ 2 ವರೆಗೂ 20 ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ತಾವು ಕೆಲಸ ನಿರ್ವಹಿಸುವ ನೌಕರಿ ಮರೆಮಾಚಿ ಅಧಿಕಾರಿ ಮತ್ತು ನೌಕರರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆನ್ಲೈನ್ ವಂಚನೆಯಲ್ಲಿ ಮತ್ತಷ್ಟು ನೌಕರರು ಹಣ ಕಳೆದುಕೊಂಡಿರುವ ಶಂಕೆಯಿದೆ. ದೂರು ದಾಖಲಿಸಿಕೊಂಡಿರುವ ಕೆಜಿಎಫ್ನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೂರುದಾರ ವಾಟ್ಸ್ಆ್ಯಪ್ ಚಾಟ್ ಮಾಡುತ್ತಿದ್ದಾಗ ಮೊಬೈಲ್ಗೆ ಸಂದೇಶ ಬಂದಿದೆ. ಮಾಡಿದಾಗ ಹಣ ಕಾಣಿಸಿದ್ದು, 1500 ರಿಂದ 3 ಲಕ್ಷದ ರೂ. ವರೆಗೂ ಡಿಪಾಸಿಟ್ ಮಾಡಿದರೆ ಅದು ದ್ವಿಗುಣವಾಗುತ್ತದೆ ಎಂದು ವಂಚಕರು ಯಾಮಾರಿಸಿದ್ದಾರೆ.
ದೂರುದಾರ ಮೊದಲಿಗೆ 1000 ಡಿಪಾಸಿಟ್ ಮಾಡಿದ್ದು, 3000 ಬಂದಿದೆ. ಇದನ್ನು ನಂಬಿ ಸಹೋದ್ಯೋಗಿಗಳಿಗೂ ತಿಳಿಸಿ, ಲಿಂಕ್ ಶೇರ್ ಮಾಡಿದ್ದಾನೆ. ಇದನ್ನೇ ನಂಬಿದ ಉಳಿದವರು ಲಿಂಕ್ ಬಳಸಿ ಹಣ ಹೂಡಿದ್ದಾರೆ. ಇದಕ್ಕೆ ಪೂರಕವಾಗಿ ವಂಚಕರು ವಿವಿಧ ರೀತಿಯ ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿಯಿಂದ ಯುಪಿಐ ನಂಬರ್ಗಳನ್ನು ಸೈಬರ್ ಕಳುಹಿಸಿಕೊಟ್ಟು ಹಣ ಪೊಲೀಸರಿಗೆ ಪಾವತಿ ಮಾಡಿ ಬಿಸಿನೆಸ್ ಶುರು ಮಾಡುವಂತೆ ನಂಬಿಸಿದ್ದಾರೆ. ಇದನ್ನು ನಂಬಿದ ನೊಂದ ವ್ಯಕ್ತಿಗಳು ಫೋನ್ ಪೇ, ones He List BE SIDEJES ಮಾಡಿಸಿಕೊಂಡಿದ್ದಾರೆ.
ಲಿಂಕ್ನಲ್ಲಿ ಬರುವ ಅಕೌಂಟ್ನಲ್ಲಿ ಹಣ ಡಿಪಾಸಿಟ್ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ 20,56,295 ರೂಪಾಯಿಯನ್ನು ವಂಚಕರಿಗೆ ಜಮಾ ಮಾಡಿದ್ದಾರೆ. ಅವರು ನೀಡಿದ್ದ ಲಿಂಕ್ ಬ್ಲಾಕ್ ಆಗಿದೆ. ವ್ಯಾಟ್ಸಪ್ನಲ್ಲಿ ಲಿಂಕ್ ಗಳನ್ನು ಅಮಾನ್ಯ ಮಾಡಿದ್ದಾರೆ. ಅಕೌಂಟ್ಾರರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸಬೇಕು ಎಂದು ರಾಜೇಶ್ ದೂರು ನೀಡಿದ್ದು, ಪೊಲೀಸರು ದೂರು ಸೈಬರ್ ಕ್ರೈಂ ಪೊಲೀಸರು ವಂಚಕರಿಗಾಗಿ ದಾಖಲಿಸಿಕೊಂಡಿದ್ದಾರೆ.