ಭುವನೇಶ್ವರ: ಬುಧವಾರ ಬೆಳಗ್ಗೆ ಟ್ರಕ್ ಹರಿದು 35 ವರ್ಷದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಒಡಿಶಾದ ಕೋಸ್ಟಲ್ ಭದ್ರಕ್ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತ ಸಂಭವಿಸಿದ ಬಳಿಕ ಗಂಭೀರ ಗಾಯಗಳಿಂದ ಸುಮಾರು ಅರ್ಧಗಂಟೆಯವರೆಗೂ ರಸ್ತೆಯಲ್ಲಿ ನರಳಾಡುತ್ತಿದ್ದ ಆತನನ್ನು ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದೆ, ಸೆಲ್ಫಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಗೆಲ್ಪುರ್ ಗ್ರಾಮದವರಾದ ದೇವೇಂದ್ರ ಸಾಹು ಭದ್ರಕ್ ಜಿಲ್ಲೆಗೆ ತೆರಳಿದ್ದರು. ಇದೇ ವೇಳೆ ಸಿಮೆಂಟ್ ತುಂಬಿದ ಟ್ರಕ್ ಆತನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮೇಲೆ ಹರಿದಿದೆ. ಭದ್ರಕ್ನ ಶಹಪುರ್ ಚೌಕ್ ಬಳಿಕ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಸುಮಾರು 30 ನಿಮಿಷಗಳವರೆಗೆ ನರಳಾಡುತ್ತಿದ್ದ ವ್ಯಕ್ತಿ ದಾರಿಹೋಕರನ್ನು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ನೆರವಿಗೆ ಬಾರದ ಮಂದಿ ಆಸ್ಪತ್ರೆಗೆ ದಾಖಲಿಸುವ ಬದಲು ತಮ್ಮ ಸ್ಮಾರ್ಟ್ಫೋನ್ಗಳನ್ನು ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಕ್ರೂರತ್ವ ಮೆರೆದಿದ್ದಾರೆ. ಇನ್ನು ಮುಂದೆ ಹೋಗಿ ಒಡಿಯಾ ಡೈಲಿ ವೆಬ್ಸೈಟ್ ವರದಿಗಾರ ಫೇಸ್ಬುಕ್ ಲೈವ್ಗೆ ಬಂದಿದ್ದ ಎಂದು ಹೇಳಲಾಗಿದೆ.
ಬಳಿಕ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದಾದರೂ, ಅವರ ಬರುವಷ್ಟರಲ್ಲಿ ಸಮಯ ಮೀರಿತ್ತು. ಆತನನ್ನು ಬಳಿಕ ಭದ್ರಕ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದಾದರೂ ಆಗಲೇ ಸಾಕಷ್ಟು ರಕ್ತ ಹರಿದಿದ್ದರಿಂದ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾಗಿ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಅತಿಶ್ ಕುಮಾರ್ ಬೆಹೆರಾ ತಿಳಿಸಿದ್ದಾರೆ. ದಾರಿಹೋಕರು ಸಮಯಪ್ರಜ್ಞೆ ತೋರಿದ್ದರೆ ಆತನನ್ನು ಬದಕಿಸಬಹುದಿತ್ತು ಎಂದಿದ್ದಾರೆ. (ಏಜೆನ್ಸೀಸ್)