ವಿಜಯಪುರ: ನಗರದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆಯಲ್ಲಿ ಬುಧವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಆಚರಿಸಿ ವಿಶ್ವ ರೆಡ್ ಕ್ರಾಸ್ ಸಂಸ್ಥೆ ಸಂಸ್ಥಾಪಕ ಜಿನ ಹೆನ್ರಿ ಡೊನಂಟ್ರವರು ವಿಶ್ವಕ್ಕೆ ನೀಡಿದ ಕೊಡುಗೆ ಸ್ಮರಿಸಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಎರಡು ದಿನದ ಜನ ಹಿತ ಕಾರ್ಯಕ್ರಮ ಕೈಗೊಳ್ಳಲಾಯಿತು.
ರೆಡ್ ಕ್ರಾಸ್ ಸಂಸ್ಥೆ ಅಂಗ ಸಂಸ್ಥೆಯಾದ ಜ್ಯೂ. ರೆಡ್ ಕ್ರಾಸ್ ಟಕದಿಂದ ನಗರದ ರೂಪಾದೇವಿ ಸ್ಕೂಲ್ ಮಕ್ಕಳಿಂದ ಜಾಗತಿಕ ಶಾಂತಿ, ಸಾರ್ವಜನಿಕ ಆರೋಗ್ಯ ಮತ್ತು ನಿರ್ಮಲ ವಾತಾವರಣಕ್ಕಾಗಿ ನಗರದ ನಾಲ್ಕು ಸ್ಮಾರಕಗಳ ಮುಂಭಾಗದಲ್ಲಿ ಭಿತ್ತಿ ಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ತಾಲೂಕಿನ ಶಿರನಾಳ ಗ್ರಾಮದಲ್ಲಿ ಗುರುವಾರ ರೆಡ್ ಕ್ರಾಸ್ ಸಂಸ್ಥೆ, ಬಿದರಿಯವರ ಚಿಕ್ಕಮಕ್ಕಳ ಆಸ್ಪತ್ರೆ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು.
ಶಿಬಿರದಲ್ಲಿ ಸಿರೋಗ ತಜ್ಞೆ ಡಾ. ಪ್ರಿಯದರ್ಶಿನಿ ಪಾಟೀಲ, ಚಿಕ್ಕ ಮಕ್ಕಳ ತಜ್ಞ ಡಾ. ಎಲ್.ಎಚ್. ಬಿದರಿ, ಡಾ. ಬಸವರಾಜ ಉಟಗಿ, ಆಥೋರ್ಪಿಡಿಕ್ ಡಾ. ಸಂದೀಪ ನಾಯಕ ಹಾಗೂ ಮತ್ತಿತರರ ಪರೀಣಿತ ವೈದ್ಯರಿದ್ದರು. ಸುಮಾರು 286 ರೋಗಿಗಳಿಗೆ ತಪಾಸಣೆ ನಡೆಸಲಾಯಿತು.
ನಂತರ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ 41 ಜನರು ರಕ್ತದಾನ ಮಾಡಿದರು. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ 100 ಮಹಿಳೆಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಪೌಷ್ಠಿಕ ಆಹಾರ ಕಿಟ್ ವಿತರಿಸಲಾಯಿತು.
ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಶಿರನಾಳ ಗ್ರಾಮದ ಮಠದ ಶಾಲೆಯ ಆವರಣದಲ್ಲಿ 80 ಗಿಡಗಳನ್ನು ಗ್ರಾಮಸ್ಥರ ನೆರವಿನಿಂದ ನಡೆಸಲಾಯಿತು. ವಿಶ್ವ ರೆಡ್ ಕ್ರಾಸ್ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಜಿಲ್ಲಾ ಚೇರ್ಮನ್ ಶರದ ರೊಡಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.