More

    ಕುರುಬರು ಮಾತ್ರವಲ್ಲ ಲಿಂಗಾಯತರು, ಈಡಿಗರೂ ನನ್ನ ಜತೆಗಿದ್ದಾರೆ

    ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ನನ್ನ ಜತೆ ಕುರುಬರು ಮಾತ್ರವಲ್ಲ. ವೀರಶೈವರು, ಲಿಂಗಾಯತರು ಮತ್ತು ಈಡಿಗರೂ ಇದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಮಲ್ಲೇಶ್ವರ ಗುಂಡಪ್ಪಶೆಡ್‌ನ ತಮ್ಮ ನಿವಾಸದಲ್ಲಿ ಗುರುವಾರ ಶಿವಮೊಗ್ಗ ಲೋಕಸಭೆ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕುರುಬರು ಕಡಿಮೆ ಇದ್ದಾರೆ. ಲಿಂಗಾಯತರು, ಮುಸ್ಲಿಮರು ಹೆಚ್ಚಿದ್ದು ಎಲ್ಲ ಸಮಾಜದವರೂ ನನ್ನನ್ನು ಐದು ಬಾರಿ ಗೆಲ್ಲಿಸಿದ್ದಾರೆ. ಹಾಗಾಗಿ ಈ ಬಾರಿ ಎಲ್ಲ ಸಮಾಜದವರು ನನ್ನ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಇಡೀ ಜೀವನದಲ್ಲಿ ನಾನೆಂದೂ ಆರ್‌ಎಸ್‌ಎಸ್ ನೀಡಿದ ಸೂಚನೆ ಮೀರಿಲ್ಲ. ನನ್ನ ಮನೆಗೆ ಬಿಜೆಪಿ ಹಿರಿಯ ನಾಯಕರು ಬಂದಿದ್ದರು. ಅವರಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಬಾರಿ ಅಭಿಮಾನಿಗಳು, ಕಾರ್ಯಕರ್ತರು ಬೇರೆ ಮತಕ್ಷೇತ್ರಗಳ ಬಗ್ಗೆ ಗಮನ ಹರಿಸುವುದು ಬೇಕಿಲ್ಲ. ನಿಮ್ಮ ಮನೆ, ಬೂತ್ ಬಗ್ಗೆ ಗಮನ ಹರಿಸಿದರೆ ಗೆಲುವು ಸುಲಭವಾಗುತ್ತದೆ ಎಂದರು.
    ಪ್ರಮುಖರಾದ ನಾಗೇಶ್, ಮಹೇಶ್ ಕುಮಾರ್, ಭದ್ರಾವತಿಯ ವೆಂಕಟೇಶ್, ಭೂಪಾಲ, ರಘು ನಾಯ್ಡು, ಬೂದ್ಯಪ್ಪ, ಜಗದಪ್ಪ, ಕೊಟ್ರೇಶ್, ಗಂಗಾಧರ ಮಂಡನೇಕೊಪ್ಪ ಮಾತನಾಡಿದರು. ಕೆ.ಇ.ಕಾಂತೇಶ್, ಮಹಾಲಿಂಗಶಾಸ್ತ್ರಿ, ಆರತಿ ಆ.ಮ.ಪ್ರಕಾಶ್, ಇ.ವಿಶ್ವಾಸ್, ಲಕ್ಷ್ಮೀ ಶಂಕರನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts