More

    ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಇರಲ್ಲ, ವಾರಾಂತ್ಯದ ರಜೆಯೂ ಇಲ್ಲ

    ನವದೆಹಲಿ: ಕೋವಿಡ್ 19 ಸಂಕಷ್ಟದ ಸನ್ನಿವೇಶದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಈ ಸಲ ಪ್ರಶ್ನೋತ್ತರ ಅವಧಿ ಮತ್ತು ಪ್ರೈವೇಟ್ ಮೆಂಬರ್ಸ್ ಬಿಜಿನೆಸ್ ಇರುವುದಿಲ್ಲ ಎಂದು ರಾಜ್ಯಸಭಾ ಸಚಿಲಾಯದ ಅಧಿಸೂಚನೆ ತಿಳಿಸಿದೆ. ಆದಾಗ್ಯೂ, ಶೂನ್ಯವೇಳೆ ಮತ್ತು ಇತರೆ ಕಲಾಪಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಅದು ಸ್ಪಷ್ಟಪಡಿಸಿದೆ.

    ಈ ಸಲದ ಮುಂಗಾರು ಅಧಿವೇಶನ ಸಂಸತ್ತಿನಲ್ಲಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1 ರ ತನಕ ನಡೆಯಲಿದೆ. ಕಲಾಪಕ್ಕೆ ಹಾಜರಾಗುವವರೆಲ್ಲರೂ ಕೋವಿಡ್ ಟೆಸ್ಟ್​ಗೆ ಒಳಗಾಗುವುದು ಸೇರಿ ಕರೊನಾ ವೈರಸ್​ ನಿಯಮಗಳನ್ನು ಪಾಲಿಸಬೇಕು.

    ಇದನ್ನೂ ಓದಿ: ಯುಎನ್​ಎಸ್​ಸಿಯಲ್ಲಿ ಜಮ್ಮು-ಕಾಶ್ಮೀರದ ವಿಚಾರ ಔಟ್​ಡೇಟ್​

    ಎಎನ್​ಐ ವರದಿ ಪ್ರಕಾರ, ವಾರಂತ್ಯವೂ ರಜೆ ಇರಲ್ಲ. ಉಭಯ ಸದನಗಳ ಕಲಾಪ ನಿತ್ಯವೂ ನಡೆಯಲಿದೆ. ಮೊದಲ ದಿನ (ಸೆಪ್ಟೆಂಬರ್ 14) ಲೋಕಸಭೆಯ ಕಲಾಪ ಬೆಳಗ್ಗೆ 9ರಿಂದ ಅಪರಾಹ್ನ 1 ಗಂಟೆ ತನಕ, ರಾಜ್ಯಸಭೆಯ ಕಲಾಪ ಅಪರಾಹ್ನ 3 ರಿಂದ ರಾತ್ರಿ 7ರ ತನಕ ನಡೆಯಲಿದೆ. ಆನಂತರದ ದಿನಗಳಲ್ಲಿ ರಾಜ್ಯಸಭೆಯ ಕಲಾಪ ಬೆಳಗ್ಗೆಯೂ, ಲೋಕಸಭೆಯ ಕಲಾಪ ಅಪರಾಹ್ನವೂ ನಡೆಯಲಿದೆ. ಉಭಯ ಸದನಗಳು ನಿತ್ಯವೂ ನಾಲ್ಕು ಗಂಟೆ ಕಲಾಪ ನಡೆಸಲಿವೆ. (ಏಜೆನ್ಸೀಸ್)

    ತವರಿನ ಆಸ್ತಿ ಪಾಲು ಕೇಳೆಂದು ಕಿರುಕುಳ ನೀಡ್ತಿದ್ದಾರೆನ್ನುತ್ತ ಸಾವಿಗೆ ಶರಣಾದ್ಳು- ಪ್ರೇಮವಿವಾಹದ ದುರಂತಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts