ನವದೆಹಲಿ: IPL 16ನೇ ಆವೃತ್ತಿ ಶುರುವಿಗೆ ಇನ್ನೇನು ದಿನಗಳು ಹತ್ತಿರವಾಗುತ್ತಿದ್ದಂತೆ ಕೊಲ್ಕತಾ ನೈಟ್ ರೈಡರ್ಸ್(KKR) ತಂಡವು ಅಚ್ಚರಿಯ ನಿರ್ಧಾರವನ್ನ ಪ್ರಕಟಿಸಿದೆ.
ತಂಡದ ಮ್ಯಾನೇಜ್ಮೆಂಟ್ ಎಡಗೈ ಬ್ಯಾಟ್ಸ್ಮ್ಯಾನ್ ನಿತೀಶ್ ರಾಣಾರನ್ನ ತಂಡದ ನೂತನ ನಾಯಕನನ್ನಾಗಿ ಘೋಷಿಸಿದೆ. ಹಾಲಿ ನಾಯಕ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ತಂಡವನ್ನ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ರೇಸ್ ಕೋರ್ಸ್ ರಸ್ತೆ ಇನ್ನು ಮುಂದೆ ಅಂಬರೀಶ್ ರಸ್ತೆ; ನಾಮಫಲಕ ಅನಾವರಣಗೊಳಿಸಿದ ಸಿಎಂ
ಇತ್ತೀಚಿಗೆ ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು.
ನಿತೀಶ್ ರಾಣಾಗೂ ಮೊದಲು ಕೆಕೆಆರ್ ತಂಡದ ನಾಯಕತ್ವವನ್ನ ವೆಸ್ಟ್ ಇಂಡೀಸ್ನ ಮಾಜಿ ಆಲ್ರೌಂಡರ್ ಸುನೀಲ್ ನರೇನ್, ಸ್ಪೋಟಕ ಬ್ಯಾಟ್ಸ್ಮ್ಯಾನ್ ಆಂಡ್ರೆ ರಸೆಲ್ ಹೆಸರು ಕೂಡ ಪ್ರಮುಖವಾಗಿ ಕೇಳಿ ಬಂದಿತ್ತು.