More

    ನಿಜಗುಣಿ ಅಧ್ಯಕ್ಷ, ಅಶೋಕ ಉಪಾಧ್ಯಕ್ಷ

    ಸಂಬರಗಿ: ಸಮೀಪದ ಮದಬಾವಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ನಿಜಗುಣಿ ಮಗದುಮ್ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ನೂಲಿ ಘೋಷಿಸಿದರು.

    ನೂತನ ಅಧ್ಯಕ್ಷ ನಿಜಗುನಿ ಮಗದುಮ್ಮ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಗುರಿ ಹೊಂದಿದ್ದೇವೆ. ಸದಸ್ಯರು ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ಸಂರ್ಪಕಿಸಬೇಕು ಎಂದರು.

    ಕಾಂಗ್ರೆಸ್ ಮುಖಂಡ ವಿನಾಯಕ ಬಾಗಡಿ ಮಾತನಾಡಿ, ನಾವು ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.

    ಸಂಘದ ನಿರ್ದೇಶಕರಾದ ಅರ್ಜುನ ಇಬ್ರಾಹಿಂಪುರ, ಅಮಸಿದ್ದ ರೋಗಿ, ಭೀಮು ಚೌಗಲಾ, ರಾವಸಾಹೇಬ ಮಗದುಮ್ಮ, ಪ್ರಮೀಳಾ ಮೆಂಡಿಗೇರಿ, ಭಾಗ್ಯಶ್ರೀ ಸೂರ್ಯವಂಶಿ, ಮಲ್ಲಪ್ಪ ದೇವಕತೆ, ಮನೋಹರ ಪೂಜಾರಿ, ವಿಠ್ಠಲ ಅವಳೆ, ಸಿದರಾಯ ಪತಂಗೆ, ಗಣ್ಯರಾದ ಆಶೋಕ ಸೂರ್ಯವಂಶಿ, ಬಾಬು ಮೆಂಡಿಗೇರಿ, ಸಿದರಾಯ ತೊಡಕರ, ರಾಮನಗೌಡ ಪಾಟೀಲ, ಅಸ್ಲಂ ಮುಲ್ಲಾ, ಸಂಜಯ ಅದಾಟೆ, ತಿರುಪತಿ ಮಗದುಮ್ಮ, ಪ್ರವೀಣ ಬಂಡಾರೆ, ಉದಯ ಪವಾರ, ಸಚೀನ ಖಟ್ಟೆ, ಪರಸು ರಾಜಮಾನೆ, ತಾತ್ಯಾಸಾಬ ನಾಯಿಕ, ಶಿವಾನಂದ ಮಗದುಮ್ಮ,

    ಸೋಮಲಿಂಗ ಮಗದುಮ, ಅಪ್ಪು ಚೌಗಲಾ, ಪ್ರಕಾಶ ಖಟ್ಟೆ, ಸಂತೋಷ ನಾಯಿಕ, ಅಶೋಕ ಪಾಟೀಲ, ಗಿರಿಮಲ್ಲ ಇಬ್ರಾಹಿಂಪುರ, ಪರಗೋಂಡ ಮುಧೋಳ, ಅಣ್ಣಪ್ಪ ಪಾಟೀಲ, ಸತ್ಯಪ್ಪ ಕೆಂಪವಾಡೆ, ಬಸು ಮಗದುಮ, ಸಿದರಾಯ ಕಾಳೆಲೆ, ಸುನಿಲ ಮನೆ, ಲಕ್ಷ್ಮಣ ಅವಲೆ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಣ್ಣಾಸಾಬ ಮೆಂಡಿಗೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts