ನವದೆಹಲಿ: ಇಸ್ಲಾಮಿಕ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾದ ವ್ಯಕ್ತಿಗಳ ಗುಂಪೊಂದರ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ದಿಢೀರನೇ ದೆಹಲಿ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ದಾಳಿ ಮಾಡಿದೆ.
ಕೇವಲ 48 ಗಂಟೆಗಳ ಹಿಂದೆ ಎನ್ಐಎ ದಾಖಲಿಸಿಕೊಂಡ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿಢೀರ್ ದಾಳಿ ನಡೆದಿದೆ. ಸುಮಾರು 6 ರಿಂದ 7 ಮಂದಿ ಗುಂಪನ್ನು ತನಿಖಾ ಸಂಸ್ಥೆ ಕೆಲವು ದಿನಗಳಿಂದ ಮೇಲ್ವಿಚಾರಣೆ ನಡೆಸುತ್ತಿತ್ತು. ಈ ಸಂಬಂಧ ಎನ್ಐಎ ಕೇಸ್ ದಾಖಲಿಸಿಕೊಂಡಿತ್ತು.
ಇದನ್ನೂ ಓದಿರಿ: ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್!
ಮೂಲಗಳ ಪ್ರಕಾರ ಸದ್ಯದ ದಾಳಿಯಲ್ಲಿ ಐವರು ಆರೋಪಿಗಳನ್ನ ಎನ್ಐಎ ಬಂಧಿಸಿದೆ. ಪ್ರಭಾವಶಾಲಿ ಮುಸ್ಲಿಂ ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ನೇರವಾಗಿ ಟಾರ್ಗೆಟ್ ಮಾಡುತ್ತಿರುವ ಪಾಕಿಸ್ತಾನ, ಅವರನ್ನು ಆನ್ಲೈನ್ ಮೂಲಕವೇ ನೇಮಕ ಮಾಡಿಕೊಂಡು ತರಬೇತಿ ನೀಡಿ ಸ್ಥಳೀಯ ದಾಳಿಗಳನ್ನು ನಡೆಸಲು ಪಾಕ್ ಪ್ಲಾನ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)
ಜಯಲಲಿತಾ ಸಾವಿಗೆ ಯಾರು ಹೊಣೆ? ಸ್ಫೋಟಕ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ!