ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರಿ ಶಾಲೆಗಳ ಮುಖ್ಯಸ್ಥರನ್ನು ಅರವಿಂದ ಕೇಜ್ರಿವಾಲ ಆಹ್ವಾನಿಸಿದ್ದಾರೆ.
ಈ ಕ್ರಮಕ್ಕೆ ಮೆಚ್ಚುಗೆ ಮತ್ತು ವಿರೋಧಗಳೆರಡು ಕೇಳಿಬಂದಿವೆ. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಲಾ ಮುಖ್ಯಸ್ಥರನ್ನು ಆಹ್ವಾನಿಸಿದ್ದು ಸರಿ. ಆದರೆ ಅವರನ್ನು ಒತ್ತಾಯಪೂರ್ವಕವಾಗಿ ಕರೆತರಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ಆಹ್ವಾನಿಸಿರುವುದು ಒಳ್ಳೆಯದು. ಆದರೆ ಅವರನ್ನು ಬರಲೇಬೇಕು ಎಂದು ಒತ್ತಾಯಿಸುವ ಮೂಲಕ ಕೆಟ್ಟ ಸಂಪ್ರಾದಾಯಕ್ಕೆ ಆಮ್ ಆದ್ಮಿ ಪಕ್ಷ ನಾಂದಿ ಹಾಡುತ್ತಿದೆ. ಇಂತಹದ್ದಕ್ಕೆ ಬೆಂಬಲಿಸಲ್ಲ ಎಂದು ಅವರು ಟೀಕಿಸಿದ್ದಾರೆ.
ನಾಳೆ (ಭಾನುವಾರ ಫೆ.16) ಪ್ರಮಾಣವಚನ ಸಮಾರಂಭಕ್ಕೆ ಶಾಲಾ ಮುಖ್ಯಸ್ಥರು, ಸಿಬ್ಬಂದಿ ಮತ್ತು 20 ಮಂದಿ ಶಿಕ್ಷಕರು ಆಗಮಿಸಬೇಕು ಎಂದು ಆಪ್ ಮನವಿ ಮಾಡಿತ್ತು. (ಏಜೆನ್ಸೀಸ್)