More

    ನೆಲ್ಲಿಕಟ್ಟೆ – ಕೂಡ್ಲು ರಸ್ತೆ ಕಾಮಗಾರಿ ಪೂರ್ಣ

    ಹೆಬ್ರಿ: ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಡೆಯುತ್ತಿದ್ದು, ಅರ್ಧಕ್ಕೆ ನಿಂತಿದ್ದ ನೆಲ್ಲಿಕಟ್ಟೆ ಕ್ರಾಸ್ – ಕೂಡ್ಲು ಸಂಪರ್ಕಿಸುವ ರಸ್ತೆ ಡಾಂಬರು ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರಿಗೆ ಅನೇಕ ಸಮಸ್ಯೆ ಉಂಟು ಮಾಡಿತ್ತು. ಇದರಿಂದ ವಿದ್ಯಾರ್ಥಿಗಳು, ರೈತರು ಮತ್ತು ಕೂಡ್ಲು ಸಂಪರ್ಕಿಸುವ ಪ್ರವಾಸಿಗರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು.

    ಈ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಇದನ್ನು ಡಿಸಿ ಗ್ರಾಮ ವಾಸ್ತವ್ಯದಲ್ಲಿ ವರದಿಯ ಪ್ರತಿಯನ್ನು ಜಿಲ್ಲಾಧಿಕಾರಿಗೆ ನೀಡಿ ಸಮಸ್ಯೆ ಮನವರಿಕೆ ಮಾಡಲಾಗಿತ್ತು. ಇದೀಗ ಡಾಂಬರು ಕಾಮಗಾರಿ ಪೂರ್ಣಗೊಂಡ ನಂತರ ಮೇಗದ್ದೆ, ಅಜ್ಜೆಳ್ಳಿ, ಒಣಜಾರು ಮತ್ತು ಕೂಡ್ಲು ಪ್ರದೇಶದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

    ನೆಲ್ಲಿಕಟ್ಟೆ ಕ್ರಾಸ್‌ನಿಂದ ಕೂಡ್ಲು ಸಂಪರ್ಕಿಸುವ ರಸ್ತೆ ಡಾಂಬರು ಕಾಮಗಾರಿ ಸ್ಥಗಿತಗೊಂಡ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅನೇಕ ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು, ಅನೇಕ ಬಾರಿ ಸಾರ್ವಜನಿಕರು ಇದರ ಬಗ್ಗೆ ದೂರು ನೀಡಿದ್ದರು. ಕೊನೆಗೂ ಸಮಸ್ಯೆಗೆ ಪರಿಹಾರ ದೊರಕಿದೆ.
    ದಿನೇಶ್ ಹೆಗ್ಡೆ
    ಅಧ್ಯಕ್ಷರು ನಾಡ್ಪಾಲು ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts