More

    ಎನ್ ಡಿಆರ್ ಎಫ್ ತಂಡದಿಂದ ಶೋಧ ಮುಂದುವರಿಕೆ

    ಕೊಪ್ಪಳ: ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಪೇದೆ ಮಹೇಶ ಶವದ ಹುಡುಕಾಟ ಮುಂದುವರೆದಿದ್ದು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ನೀರಿಗಿಳಿದು ಶೋಧ ನಡೆಸುತ್ತಿದ್ದಾರೆ.

    ಲಿಂಗಸ್ಗೂರಿನಿಂದ ಆಗಮಿಸಿರುವ 16 ಜನರ ತಂಡ ಹಳ್ಳದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸುತ್ತಿದೆ. ಯಲಬುರ್ಗಾ ತಹಸೀಲ್ದಾರ್ ಶ್ರೀಶೈಲ ತಳವಾರ ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಾಚರಣೆ ಮುಂದುವರೆದಿದೆ. ಮಂಗಳವಾರ ರಾತ್ರಿಯೂ ಮಳೆ ಮುಂದುವರೆದಿದ್ದು, ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

    ಎನ್ ಡಿಆರ್ ಎಫ್ ತಂಡದಿಂದ ಶೋಧ ಮುಂದುವರಿಕೆ

    ಬಂದೋಬಸ್ತ್ ಗೆ ತೆರಳಿದ್ದ ಮುಂಡರಗಿ ಠಾಣೆ ಪೇದೆಗಳಾದ ನಿಂಗಪ್ಪ ಹಾಗೂ ಮಹೇಶ ಇಬ್ಬರೂ ಸೋಮವಾರ ತಡರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಮಂಗಳವಾರದಿಂದ ಇಬ್ಬರ ಹುಡುಕಾಟ ಮುಂದುವರಿಸಲಾಗಿದೆ. ಮಂಗಳವಾರ ಮಧ್ಯಾಹ್ನ ನಿಂಗಪ್ಪ ಮೃತ ದೇಹ ಪತ್ತೆಯಾಗಿದ್ದು,‌ ಮಹೇಶಗಾಗಿ ಹುಡುಕಾಟ ಮುಂದುವರೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts