ಮಂಗಳೂರು: ನಗರದ ನಾರಾಯಣ ಗುರು ವೃತ್ತದ ಬಳಿ ಇರುವ ಲೇಡಿಹಿಲ್– ಪೊಂಪೈ ಶಾಲೆ, ಉರ್ವದ ಕೆನರಾ ಶಾಲೆ ಹಾಗೂ ಬೆಂದೂರ್ವೆಲ್ನ ಸಂತ ಆಗ್ನೆಸ್ ಶಾಲೆಯ ಬಳಿ ಸ್ಕೂಲ್ ಜೋನ್ಗಳಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಗುರುವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿ ನಗರದಲ್ಲಿ ಪ್ರಥಮ ಬಾರಿಗೆ ಸ್ಕೂಲ್ ಜೋನ್ ಅನುಷ್ಠಾನವಾಗುತ್ತಿದೆ. ಮೂರು ಸ್ಕೂಲ್ ಜೋನ್ಗಳಿಗೆ ಸುಮಾರು 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಶಾಲಾ ಸಂರಕ್ಷಣಾ ವಲಯ, ಸಂಚಾರಿ ಸುಧಾರಣೆಯ ಸೈನ್ ಬೋರ್ಡ್ ಸೇರಿದಂತೆ ಜೀಬ್ರಾ ಕ್ರಾಸಿಂಗ್ ಅಳವಡಿಸಲಾಗುವುದು. ಶಾಲಾ ವಲಯ ಇದೆ. ಎಚ್ಚರಿಕೆಯಿಂದ ಪ್ರಯಾಣಿಸಿ ಎನ್ನುವ ಸೂಚನೆ ವಾಹನ ಚಾಲಕರಿಗೆ ಅರ್ಧ ಕಿ.ಮೀ ದೂರದಲ್ಲಿಯೇ ಲಭ್ಯವಾಗುತ್ತದೆ ಎಂದರು.
ಕಾರ್ಪೋರೇಟರ್ಗಳಾದ ಸಂಧ್ಯಾ ಮೋಹನ್ ಆಚಾರ್ಯ, ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.