ಬೆಂಗಳೂರು: ಭಾರತದ ರಾಮ್ಕುಮಾರ್ ರಾಮನಾಥನ್ ಹಾಗೂ ಸಾಕೇತ್ ಮೈನೇನಿ ಜೋಡಿ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹಮ್ಮಿದೆ. ಟೂರ್ನಿಯ ಸಿಂಗಲ್ಸ್ ವಿಭಾಗದ ಸೆಮೀಸ್ನಲ್ಲಿ ಸುಮಿತ್ ನಗಾಲ್ ನಿರಾಸೆ ಅನುಭವಿಸುವುದರೊಂದಿಗೆ ಭಾರತೀಯರ ಸವಾಲು ಅಂತ್ಯಗೊಂಡಿತು.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಂಗಣದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ರಾಮ್ಕುಮಾರ್-ಸಾಕೇತ್ ಜೋಡಿ 6-3, 6-4 ನೇರಸೆಟ್ಗಳಿಂದ ್ರಾನ್ಸ್ನ ಮ್ಯಾಕ್ಸಿಮ್ ಜಾನ್ವಿಯರ್-ಕಾನ್ಸ್ಟಾಂಟಿನ್ ಬಿಟೌನ್ ಕೌಜ್ಮಿನ್ ಜೋಡಿ ಎದುರು ಸುಲಭ ಗೆಲುವು ದಾಖಲಿಸಿ ಪ್ರಶಸ್ತಿ ಒಲಿಸಿಕೊಂಡಿತು.
https://x.com/Media_SAI/status/1758913163452723442?s=20
ನಗಾಲ್ಗೆ ಸೋಲು: ಸಿಂಗಲ್ಸ್ ಸೆಮಿೈನಲ್ನಲ್ಲಿ ವಿಶ್ವ ನಂ. 98 ಸುಮಿತ್ ನಗಾಲ್ 6-7, 4-6 ನೇರಸೆಟ್ಗಳಿಂದ ಇಟಲಿಯ ಸ್ಟೆಾನೋ ನಪೊಲಿಟಾನೊ ಎದುರು ಸೋಲು ಕಂಡರು. ಮೊದಲ ಸೆಟ್ನ ಟೈ ಬ್ರೇಕರ್ನಲ್ಲಿ 7-2ರಿಂದ ಹಿನ್ನಡೆ ಅನುಭವಿಸಿದ ನಗಾಲ್, ಟೂರ್ನಿಯ 7ನೇ ಶ್ರೇಯಾಂಕಿತ ಆಟಗಾರನ ಎದುರು ಮುಗ್ಗರಿಸಿದರು. ಇದರೊಂದಿಗೆ ಕಳೆದ 2 ವಾರಗಳ ಅವರ ಅಜೇಯ ಓಟ ಕೊನೆಗೊಂಡಿದೆ. ಭಾನುವಾರ ನಡೆಯಲಿರುವ ೈನಲ್ನಲ್ಲಿ ಸ್ಟೆಾನೋ ನಪೊಲಿಟಾನೊ ಕೊರಿಯಾದ ಸಿಯಾಂಗ್ ಚಾನ್ ಹಾಗ್ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.