ಮಂಗಳೂರು: ಮಂಗಳೂರಿನ ಪಂಪ್ವೆಲ್ ಬಳಿ ಇರುವ ಲಾಡ್ಜ್ ಒಂದರಲ್ಲಿ ವ್ಯಕ್ತಿ ಒಬ್ಬರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ ಆಗಿದೆ. ವಿಚಿತ್ರ ಎಂದರೆ ಇವರು ಸಾವಿಗೀಡಾಗುವ ಮುನ್ನ ಆ ರೂಮಿನಲ್ಲಿ ಓರ್ವ ಮಹಿಳೆ ಬಂದು ಹೋಗಿದ್ದರು!
ಮಂಗಳೂರಿನ ಪಂಪ್ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ ನಲ್ಲಿ ಅಬ್ದುಲ್ ಕರೀಮ್ ಎನ್ನುವವರ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆ ಆಗಿದೆ. ಇವರು ಕಾಸರಗೋಡಿನ ಉಪ್ಪಳ ನಿವಾಸಿ.
ಅಬ್ದುಲ್ ಕರೀಮ್ ನಿನ್ನೆ ಬೆಳಗ್ಗೆ ಬಂದು ಲಾಡ್ಜ್ ಪಡೆದಿದ್ದರು. ಆದರೆ ಇಂದು ಮಧ್ಯಾಹ್ನ 1.30 ಸುಮಾರಿಗೆ ಕರೀಮ್ ಇದ್ದ ರೂಮ್ಗೆ ಮಹಿಳೆ ಒಬ್ಬರು ಭೇಟಿ ನೀಡಿದ್ದಾರೆ. ಆಮಹಿಳೆ ಹೆಚ್ಚು ಸಮಯ ಅಲ್ಲಿ ನಿಲ್ಲದೇ ಕೇವಲ ಒಂದೇ ಗಂಟೆಯಲ್ಲಿ ರೂಮ್ನಿಂದ ತೆರಳಿದ್ದಾರೆ. ಆ ಮಹಿಳೆ ಸುಮಾರು 2.30ಕ್ಕೆ ವಾಪಾಸ್ ಹೋಗಿದ್ದೂ ಆಕೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಕರೀಂ ಮೃತಪಟ್ಟ ರೂಂನಲ್ಲಿ ‘ಕ್ಷೀರಾಬಲ’ ಹೆಸರಿನ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆ ಆಗಿದೆ. ಹೀಗಾಗಿ ಈ ಸಾವು ಆಕಸ್ಮಿಕವೋ ಅಥವಾ, ಬೇಕೆಂದು ಮಾಡಿದ ಯೋಜಿತ ಕೊಲೆಯೋ ಎನ್ನುವ ಅನುಮಾನ ಎದ್ದಿದೆ. ಇದೀಗ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಬ್ದುಲ್ ಕರೀಮ್ ಕುಟುಂಬದವರು ಕಂಕನಾಡಿ ಪೊಲೀಸ್ ಠಾಣೆಗೆ ಅನುಮಾನಸ್ಪದ ಸಾವು ಎಂದು ದೂರು ದಾಖಲಿಸಿದ್ದಾರೆ.