More

    ಎನ್.ನಿಂಗರಾಜು ಅವಿರೋಧ ಆಯ್ಕೆ

    ಮಂಡ್ಯ : ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ಪ್ರಾಥಮಿಕ ಗ್ರಾಮೀಣಾ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೋಣಸಾಲೆ ಎನ್.ನಿಂಗರಾಜು ಅವಿರೋಧವಾಗಿ ಆಯ್ಕೆಯಾದರು.


    ಹಿಂದಿನ ಅಧ್ಯಕ್ಷರಾಗಿದ್ದ ಬಿ.ಎಸ್.ಕೃಷ್ಣಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎನ್.ನಿಂಗರಾಜು ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಬಿ.ಆರ್.ಸುಧಾ ಘೋಷಣೆ ಮಾಡಿದರು.
    ಎನ್.ನಿಂಗರಾಜು ಮಾತನಾಡಿ, ಷೇರುದಾರರಿಗೆ ಮತ್ತು ರೈತರಿಗೆ ಗುಣಮಟ್ಟದ ಸೇವೆಯನ್ನು ಒದಗಿಸಲು ಮತ್ತು ರೈತರಿಗೆ ಕಾಲ ಕಾಲಕ್ಕೆ ರಾಸಾಯಾನಿಕ ಗೊಬ್ಬರ, ಸಕಾಲಕ್ಕೆ ಸಾಲ ಸೌಲಭ್ಯ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಾನು ಅವಿರೋಧವಾಗಿ ಸಂಘದ ಅಧ್ಯಕ್ಷನಾಗಲು ಸಹಕರಿಸಿದ ಎಲ್ಲ ನಿರ್ದೇಶಕರಿಗೂ ಅಭಿನಂದಿಸಲಾಗುವುದು ಎಂದರು.


    ಸಂಘದ ಉಪಾಧ್ಯಕ್ಷ ಡಿ.ರೇವಣ್ಣ, ನಿರ್ದೇಶಕರಾದ ಕೆ.ಎಂ.ಪದ್ಮನಾಭ, ಕೆ.ಬಿ.ಶಂಕರಯ್ಯ, ಎಂ.ಎಚ್.ಜೀವನ್, ರವಿಕಾಂತ, ಬಿ.ಎಸ್.ಹರಿಪ್ರಸಾದ್, ಬಿ.ಎಸ್.ಕೃಷ್ಣಯ್ಯ, ಎಚ್.ಎಸ್.ಸುನೀಲ್‌ಕುಮಾರ್, ಗೀತಾ, ಉದಯಶಂಕರ್, ವೃತ್ತ ಮೇಲ್ವಿಚಾರಕ ಎಚ್.ಎಲ್.ಹರೀಶ್, ಸಂಘದ ಸಿಇಒ ಕೆ.ಸುಮಿತ್ರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts