More

    ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಮೈಸೂರು: ಆರು ತಿಂಗಳ ಹಿಂದೆಯೇ ಮಲೇಷ್ಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಯುವಕನೊಬ್ಬನ ಮೃತದೇಹ ಇದೀಗ ಹುಟ್ಟೂರಿಗೆ ಆಗಮಿಸಿದ್ದು, ಕಣ್ಣೀರಿನ ನಡುವೆಯೇ ಕೊನೆಗೂ ಮಗನ ಅಂತ್ಯಕ್ರಿಯೆ ನೆರವೇರಿಸಿ ತಾಯಿ ಸಮಾಧಾನ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಕ್ಯಾಮೆರಾಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ್ರು!

    ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ಸುಮಂತ್ (22) ಕಳೆದ ಡಿಸೆಂಬರ್​ನಲ್ಲಿ ಕೆಲಸಕ್ಕೆಂದು ಮಲೇಷ್ಯಾಗೆ ತೆರಳಿದ್ದರು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ, ಮಧ್ಯವರ್ತಿಯೊಬ್ಬ ಸುಮಂತ್​ರನ್ನು ಕೊರೆದೊಯ್ದಿದ್ದ. ಆದರೆ, ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚಿಸಿದ್ದ.

    ಇದನ್ನೂ ಓದಿ: ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಇದರಿಂದ ಮನನೊಂದಿದ್ದ ಸುಮಂತ್​ ಮರಳಿ ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದ. ಅಷ್ಟರಲ್ಲಾಗಲೇ ಸುಮಂತ್​ ಮೃತಪಟ್ಟಿರುವ ವಿಚಾರವನ್ನು ಸಹೋದ್ಯೋಗಿಗಳು ತಾಯಿಗೆ ತಿಳಿಸಿದ್ದರು. ಈ ವಿಚಾರ ಕೇಳಿದ ತಾಯಿಯ ಹೃದಯ ಶಾಕ್​ಗೆ ಒಳಗಾಗಿತ್ತು. ಮಗನ ನಿಗೂಢ ಸಾವು ನುಂಗಲಾರದ ತುತ್ತಾಗಿತ್ತು.

    ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಆದರೂ ನೋವಿನಲ್ಲೇ ಸಾವಿನ ತನಿಖೆ ಹಾಗೂ ಮೃತದೇಹವನ್ನು ತರಿಸಿಕೊಳ್ಳಲು ಭಾರತದ ರಾಯಭಾರ ಕಚೇರಿಗೆ ಸುಮಂತ್​ ಪಾಲಕರು ಮನವಿ ಮಾಡಿದ್ದರು. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶವ ಕಳುಹಿಸುವುದು ಆರು‌ ತಿಂಗಳ ತಡವಾಗಿತ್ತು. ಇದೀಗ ಸುಮಂತ್​ ಶವ ತಡವಾಗಿ ಆಗಮಿಸಿದ್ದು, ನಗು ನಗುತ್ತಾ ಹೋದ ಮಗ ಶವವಾಗಿ ಬಂದಿದ್ದನ್ನು ಕಂಡ ಪಾಲಕರ ಆಕ್ರಂದನ ಮುಗಿಲು ಮಟ್ಟಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: PHOTOS| ಆರ್​ಜಿವಿಯ ಮುಂದಿನ ಚಿತ್ರದ ನಾಯಕಿಯ ಹಾಟ್​ ಫೋಟೋಗಳನ್ನು ನೋಡಿದ್ರೆ ಫಿದಾ ಗ್ಯಾರೆಂಟಿ!

    ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts