More

    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮೇಯರ್​ ತಸ್ನೀಂ ಗರಂ..!

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿರುವ ಮೇಯರ್​ ತಸ್ನೀಂ ಬಾನು, ರೋಹಿಣಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ, ಶಿಷ್ಟಾಚಾರ ಪಾಲನೆಯ ಪಾಠ ಮಾಡಿದ್ದಾರೆ.

    ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಯವರಿಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೂ ಅವಕಾಶ ನೀಡಬೇಕು. ಆದರೆ, ಮೇಯರ್ ಅವರನ್ನು ಒಳಗೆ ಬಿಡದಂತೆ ಜಿಲ್ಲಾಧಿಕಾರಿ, ಪೋಲೀಸರಿಗೆ ಹೇಳುತ್ತಾರೆ. ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ, ಕೊನೆಯಲ್ಲಿ ನಮಗೆ ನೀಡುತ್ತೀರಿ ಎಂದು ದೂರಿದರು.

    ಇದನ್ನೂ ಓದಿ: 3 ವರ್ಷ ಇವ್ರೇ ಸಿಎಂ ಎಂದ್ರು ಕಟೀಲ್​- ಅವ್ರು ಸಿಎಂ ಆಗೋದು ತಿರುಕನಕನಸು ಎಂದ್ರು ರವಿ…

    ಸ್ವಾಗತ ಮಾಡುವಾಗಲೂ ಉಪಮಹಾಪೌರರು ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಮಾತ್ರ ಸ್ವಾಗತ ಕೋರುವುದಿಲ್ಲ‌ ಏಕೆ? ಯಾರ ಮನವೊಲಿಸಲು ಈ ಕೆಲಸ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿ, ರೋಹಿಣಿ ಸಿಂಧೂರಿಗೆ ವಿರುದ್ಧ ಮೇಯರ್ ತಸ್ನಿಂ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

    ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts