More

    ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟಿನ ಆಸೆ ಬಿದ್ದ ಮೈಸೂರಿನ ವ್ಯಕ್ತಿಗೆ ಕ್ಷಣಾರ್ಧದಲ್ಲೇ ಕಾದಿತ್ತು ಶಾಕ್​!

    ಮೈಸೂರು: ಆಸೆಗೆ ಬಿದ್ದು ಒಂದು ಕ್ಷಣ ಮೈಮರೆತರೆ ಮುಂದೆ ಪಶ್ಚತಾಪ ಪಡಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ರಸ್ತೆಯಲ್ಲಿ ಬಿದ್ದಿದ್ದ 500 ರೂ. ತೆಗೆದುಕೊಳ್ಳಲು ಹೋದ ವ್ಯಕ್ತಿ 1.50 ಲಕ್ಷ ರೂ. ಕಳೆದುಕೊಂಡು ಇದೀಗ ಯಾತನೆ ಅನುಭವಿಸುತ್ತಿದ್ದಾರೆ.

    ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಕಲ್ಕುಣಿಕೆ ಗ್ರಾಮದ ನಿವಾಸಿ ಗಣೇಶ್​, ಡೆಪಾಸಿಟ್​ ಮಾಡಿದ್ದ 1.50 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಬರಲು ಬ್ಯಾಂಕ್​ಗೆ ಹೋಗಿದ್ದರು.

    ಇದನ್ನೂ ಓದಿರಿ: ಪ್ರೇಕ್ಷಾ ಆತ್ಮಹತ್ಯೆ ಕೇಸ್​: ಲವ್ವರ್​ ಜತೆಗಿನ ಸಂಭಾಷಣೆ ಆಡಿಯೋದಲ್ಲಿದೆ ಸ್ಫೋಟಕ ಮಾಹಿತಿ!

    ಹಣವನ್ನು ಡ್ರಾ ಮಾಡಿದ ಬಳಿಕ ಕೆಲಸ ನಿಮಿತ್ತ ಹತ್ತಿರದ ಪೋಸ್ಟ್​ ಆಫೀಸ್​ಗೆ​ ತೆರಳಿದ್ದಾರೆ. ಈ ವೇಳೆ ಗಣೇಶ್​ರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಪೋಸ್ಟ್​ ಆಫೀಸ್​ನಲ್ಲಿ ಕೆಲಸ ಮುಗಿಸಿದ ಗಣೇಶ್,​ ದಾರಿ ಮಧ್ಯೆ ಶ್ರೀ ಹೋಟೆಲ್​ನಲ್ಲಿ ಟೀ ಕುಡಿದು ಹೋಗುವಾಗ ರಸ್ತೆ ಮೇಲೆ 500 ಎಸೆದ ದುಷ್ಕರ್ಮಿಗಳು, ಈ ಹಣ ನಿಮ್ಮದೇನಾ? ಎಂದಿದ್ದಾರೆ.

    ಈ ವೇಳೆ ಗಣೇಶ್​ 500 ರೂ. ನೋಟನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಅವರ ಬಳಿಯಿದ್ದ ಹಣದ ಬ್ಯಾಗ್​ ಕಸಿದು ದುಷ್ಕರ್ಮಿಗಳು ಅಲ್ಲಿಂದ ಬೈಕ್​ ಏರಿ ಪರಾರಿಯಾಗಿದ್ದಾರೆ. ತಕ್ಷಣ ಗಣೇಶ್​ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

    ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…

    ಬ್ಯಾಂಕ್​ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!

    ಬಾಕ್ಸ್​ ಆಫೀಸ್​ ಸುಲ್ತಾನನೆಂಬುದು ಮತ್ತೆ ಸಾಬೀತು: ಮೊದಲ ದಿನವೇ ಸ್ಯಾಂಡಲ್​ವುಡ್​ ದಾಖಲೆ ಮುರಿದ ಡಿ ಬಾಸ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts