More

    ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್​ ಬಳಿಕ ಮತ್ತೊಬ್ಬ ಅಧಿಕಾರಿಯ ತಲೆದಂಡ..!

    ಮೈಸೂರು: ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್​ ಬಳಿಕ ಮೈಸೂರಿನಲ್ಲಿ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ವರ್ಗಾವಣೆ ಮಾಡಲಾಗಿದೆ.

    ಡಿಎಚ್​ಒ ಅಮರನಾಥ್​ ಅವರು ನಿರಾಸಕ್ತಿಯಿಂದ ಟಾರ್ಗೆಟ್ ಆಗಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ ಸಭೆಯಲ್ಲಿ ಡಿಎಚ್‌ಒಗೆ ತರಾಟೆಗೆ ತೆಗೆದುಕೊಂಡಿದ್ದರು.

    ತಾಲೂಕುವಾರು ಕರೊನಾ ಔಷಧಿ ಹಂಚಿಕೆ ವಿಚಾರದಲ್ಲೂ ತಪ್ಪು ಮಾಹಿತಿ ನೀಡಿದ್ದರು.‌ ಈ ಬಗ್ಗೆ ಜಿಲ್ಲೆಯ ಬಹುತೇಕ ಎಲ್ಲ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

    ಮೈಸೂರಿನ ಡಿಎಚ್‌ಒ ಆಗಿ ಡಾ.ಪ್ರಸಾದ್ ನೇಮಕ ಮಾಡಲಾಗಿದೆ. ಪ್ರಸಾದ್​ ಅವರು ಈ ಹಿಂದೆ ಚಾಮರಾಜನಗರ ಡಿಎಚ್‌ಒ ಆಗಿದ್ದರು. ಅಧಿಕೃತ ಆದೇಶವಷ್ಟೇ ಬಾಕಿ ಇದೆ. (ದಿಗ್ವಿಜಯ ನ್ಯೂಸ್​)

    ಕುಡಿಯಲು ಮದ್ಯ ಸಿಗದಿದ್ದಕ್ಕೆ ಕಾಲನ್ನೇ ಕತ್ತರಿಸಿಕೊಂಡ ಭೂಪ..!

    ಕೆಆರ್​ಎಸ್​ ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ: ರೈತರ ಮುಖದಲ್ಲಿ ಮಂದಹಾಸ

    ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆಗೆ ವಂಚಿಸಲು ಯತ್ನ: ಕ್ರೆಡಿಟ್​ ಕಾರ್ಡ್​ ಮಾಹಿತಿಗಾಗಿ ಮಹಿಳೆಯಿಂದ ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts