ಬೆಂಗಳೂರು: ರಂಜಾನ್ ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಚೂರಿಯಿಂದ ಇರಿದು ತಂದೆಯನ್ನು ಹತ್ಯೆ ಮಾಡಿದ್ದ ಬಾಲನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆಸಿದ್ದಾರೆ.
17 ವರ್ಷದ ಬಾಲಕ ಬಂಧಿತ. ಈತ ಮೇ 25ರಂದು ಕಲಾಸಿಪಾಳ್ಯದಲ್ಲಿ ತನ್ನ ತಂದೆ ಸೈಯದ್ ಮುಸ್ತಾಫ್ನನ್ನು (47) ಹತ್ಯೆ ಮಾಡಿದ್ದ. ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಾಲಾಪರಾಧ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ ನಾಳೆಯಿಂದ ನಿಮ್ಹಾನ್ಸ್ ಪುನರಾರಂಭ
ಕ್ಯಾಬ್ ಚಾಲಕನಾಗಿದ್ದ ಮುಸ್ತಾಫ್, ಕುಟುಂಬದ ಜತೆ ವಿಲ್ಸನ್ ಗಾರ್ಡನ್ನಲ್ಲಿ ನೆಲೆಸಿದ್ದ. ಇಬ್ಬರು ಮಕ್ಕಳಿದ್ದರು. ಪತ್ನಿಗೆ ವಿಚ್ಛೇದನ ನೀಡಿ, 2015ರಲ್ಲಿ ಮತ್ತೊಂದು ಮದುವೆಯಾಗಿದ್ದ. ಮೊದಲನೇ ಪತ್ನಿಯಪುತ್ರ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ. ಈ ವಿರೋಧದ ನಡುವೆಯೂ ಮುಸ್ತಾಫ್ 2ನೇ ಮದುವೆಯಾಗಿದ್ದ. ಮೊದಲ ಪತ್ನಿಯ ಮನೆಗೆ ಹೋಗುವುದನ್ನೂ ಸ್ಥಗಿತಗೊಳಿಸಿದ್ದ. ಇದೇ ವಿಚಾರಕ್ಕೆ ತಂದೆ ಮೇಲೆ ಸಿಟ್ಟು ಇಟ್ಟುಕೊಂಡಿದ್ದ. ಮೇ 25ರಂದು ರಂಜಾನ್ ನಿಮಿತ್ತ ಮುಸ್ತಾಫ್ ಕಲಾಸಿಪಾಳ್ಯದಲ್ಲಿರುವ ತಾಯಿ ಮನೆಗೆ ಬಂದಿದ್ದ. ಸಂಜೆ 6 ಗಂಟೆಗೆ ಅಜ್ಜಿ ಮನೆಗೆ ತೆರಳಿದ್ದ ಪುತ್ರ,ಶುಭ ಕೋರಬೇಕು ಎಂದು ತಂದೆಯನ್ನು ಮನೆಯಿಂದ ಹೊರಗೆ ಕರೆಸಿಕೊಂಡ. ಮಾತನಾಡುವಾಗ ಏಕಾಏಕಿ ಜೇಬಿನಲ್ಲಿದ್ದ ಚೂರಿಯನ್ನು ತೆಗೆದು ಕುತ್ತಿಗೆಗೆ ಇರಿದಿದ್ದಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.