More

    ಪತ್ನಿಯ ಕತ್ತು ಸೀಳಿ ಹತ್ಯೆ

    ಠಾಣೆಗೆ ಬಂದು ಶರಣಾದ ಪತಿ

    ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ


    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ತಾಲೂಕಿನ ಬೈಲಪ್ಪನ ಪಾಳ್ಯದಲ್ಲಿ ಬುಧವಾರ ಸಂಜೆ ಎರಡನೇ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ ಗುರುವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತಾಲೂಕಿನ ಬೈಲಪ್ಪಪಾಳ್ಯದ ನಿವಾಸಿ ರಮೇಶ್(38) ಶರಣಾಗಿದ್ದು, ಮೈಸೂರಿನ ವಿದ್ಯಾರಣ್ಯಪುರ ನಿವಾಸಿ ಭಾಗ್ಯಾ(30) ಕೊಲೆಯಾದ ಮಹಿಳೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
    ಮಸಾಜ್ ಪಾರ್ಲರ್‌ನಲ್ಲಿ ಪರಿಚಯ: 4 ವರ್ಷದ ಹಿಂದೆ ರಮೇಶ್ ಮಸಾಜ್ ಮಾಡಿಸಿಕೊಳ್ಳಲು ಮೈಸೂರಿಗೆ ತೆರಳಿದ್ದ ವೇಳೆ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಾ ಪರಿಚಯವಾಗಿತ್ತು. ಪತಿ ತೊರೆದಿದ್ದ ಭಾಗ್ಯಾಳನ್ನು ರಮೇಶ್ ಎರಡನೇ ಮದುವೆಯಾಗಿದ್ದ. ಮೊದಲನೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿದ್ದ. ವಾರಕೊಮ್ಮೆ ಮೈಸೂರಿನಲ್ಲಿದ್ದ 2ನೇ ಪತ್ನಿ ಭಾಗ್ಯಾ ಮನೆಗೆ ಹೋಗಿ ಬರುತ್ತಿದ್ದ.

    ಅಕ್ರಮ ಸಂಬಂಧ ಕಂಡು ಕೆರಳಿದ ಪತಿ: ಜ.23ರಂದು ಮೈಸೂರಿಗೆ ತೆರಳಿದ್ದ ರಮೇಶ್ ಅನೇಕ ಬಾರಿ ಕರೆ ಮಾಡಿದರೂ ಪತ್ನಿ ಕರೆ ಸ್ವೀಕರಿಸಿರಲಿಲ್ಲ. ಭಾಗ್ಯಾ ವಾಸವಿದ್ದ ಮನೆಗೆ ತೆರಳಿದಾಗ ಪತ್ನಿ ಅಪರಿಚನೊಂದಿಗಿರುವ ಖಾಸಗಿ ಕ್ಷಣ ಕಂಡು ಕೆರಳಿದ್ದ. ನ.24ರಂದು ತಾಲೂಕಿನ ಗೋರಿನಬೆಲೆ ಬಳಿಯ ಬೈಲಪ್ಪಪಾಳ್ಯಕ್ಕೆ ಭಾಗ್ಯಾಳನ್ನು ಕರೆತಂದಿದ್ದ. ಅದೇ ದಿನ ಸಂಜೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪತ್ನಿ ಮೇಲೆ ಕಾಯಿ ತುರಿಯುವ ಮಣೆಯಿಂದ ಹಲ್ಲೆ ನಡೆಸಿದ ರಮೇಶ್ ನಂತರ ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದ. ಗುರುವಾರ ಬೆಳಗ್ಗೆ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾನೆ.

    ಮೊಬೈಲ್ ಸುಟ್ಟು ಆಕ್ರೋಶ: ಪತ್ನಿ ಮೊಬೈಲ್‌ನಲ್ಲಿ ಪರ ಪುರುಷನೊಂದಿಗೆ ಸಲುಗೆಯಿಂದಿರುವ ೆಟೋಗಳು ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಂಡು ಕೆರಳಿದ ಆರೋಪಿ ಮೊಬೈಲ್ ಸುಟ್ಟುಹಾಕಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾನೆ.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts