ಥಾಣೆ: ಪೊಲೀಸ್ ವೇಷದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ನಕಲಿ ಪೊಲೀಸ್ ಕಾನ್ಸ್ಟೇಬಲ್ನನ್ನ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಾಲ್ವಾ ಪೊಲೀಸರು ಶನಿವಾರ (ನ.19) ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿ ರಾಮದಾಸ್ ಜಗ್ತಾಪ್ ಪೊಲೀಸ್ ಆಗಲು ಬಯಸಿದ್ದ. ಆದರೆ, ಪರೀಕ್ಷೆಯಲ್ಲಿ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಆತನ ಆಸೆ ಕೈಗೂಡಲಿಲ್ಲ. ಇದಾದ ಬಳಿಕ ಆತ ನಕಲಿ ಪೊಲೀಸ್ ಡ್ರೆಸ್ ಖರೀದಿ ಮಾಡಿದ್ದಲ್ಲದೆ, ನಕಲಿ ಗುರುತಿನ ಚೀತಿಯನ್ನೂ ಪಡೆದ ರಾಮದಾಸ್, ತನ್ನನ್ನು ತಾನು ಪೊಲೀಸ್ ಕಾನ್ಸ್ಟೇಬಲ್ ಎಂದು ಹೇಳಿಕೊಂಡು ಅನೇಕರಿಗೆ ವಂಚನೆ ಮಾಡುತ್ತಿದ್ದ.
ಆರೋಪಿ ರಾಮದಾಸ್ ತಂದೆ ನಿವೃತ್ತ ಕಾನ್ಸ್ಟೇಬಲ್ ಆಗಿದ್ದು, ಮಗನ ಕೃತ್ಯ ಗೊತ್ತಾದ ಬಳಿಕ ಆತನಿಗೆ ಬುದ್ಧಿ ಹೇಳಿದ್ದರು. ಆದರೂ ರಾಮದಾಸ್ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಇದು ಸರಿ ಹೋಗಲ್ಲ ಅಂತಾ ಆತನ ತಂದೆ ಕಾಲ್ವಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ರಾಮದಾಸ್, ಕಾರು ಮಾಲೀಕರನ್ನು ತಡೆದ ಸಂಚಾರ ನಿಯಮ ಉಲ್ಲಂಘಟನೆ ಮಾಡಿದ್ದೀರಿ ಎಂದು ಹೇಳಿ ಹಣ ಸುಲಿಗೆ ಮಾಡುತ್ತಿದ್ದ. ಇಷ್ಟೇ ಅಲ್ಲದೆ, ನಕಲಿ ಐಡೆಂಟಿಟಿ ಕಾರ್ಡ್ ತೋರಿಸಿ ಮಹಿಳೆಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಕೆಡವಿಕೊಂಡಿದ್ದ. ಯಾವಾಗ ಈತನ ನಿಜ ರೂಪ ತಿಳಿಯಿತೋ ಆತನಿಂದ ದೂರಾವಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಲ್ವಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನೋಹರ್ ಅವ್ಹಾದ್ ಮಾತನಾಡಿ, ನವೆಂಬರ್ 13 ರಂದು ಭಾರತಿ ಎಂಬುವವರಿಂದ ನಾವು ದೂರು ಸ್ವೀಕರಿಸಿದೆವು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮದಾಸ್ ಅವರನ್ನು ನಿಲ್ಲಿಸಿದ್ದರು. ಈ ವೇಳೆ ಆತ ಪೊಲೀಸ್ ಸಮವಸ್ತ್ರ ಧರಿಸಿದ್ದ. ತನ್ನ ಫೋನ್ನಲ್ಲಿ ಕೆಲವು ಮೆಸೇಜ್ಗಳನ್ನು ಡಿಲೀಟ್ ಮಾಡುವ ನೆಪದಲ್ಲಿ ಎಕ್ಸೋಡಸ್ ಬಿಟ್ಕಾಯಿನ್ ಅಪ್ಲಿಕೇಶನ್ ತೆರೆದ ರಾಮದಾಸ್, ದೂರುದಾರೆಯ 7,669 ಡಾಲರ್ ಅನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ದೂರುದಾರರಿಗೆ ಅರಿವಾದಾಗ ಅವರು ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಾದ ಬಳಿಕ ಪೊಲೀಸ್ ಅಧಿಕಾರಿಗಳು ನಕಲಿ ಪೊಲೀಸ್ ಅಧಿಕಾರಿಯನ್ನು ಹುಡುಕಲು ಪ್ರಾರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನಾವು ಅಪರಾಧದ ಸಮಯದಲ್ಲಿ ರಾಮದಾಸ್ ಬಳಸಿದ್ದ ದಟ್ಸನ್ ಕಾರಿನ ಸಂಖ್ಯೆಯನ್ನು ನಾವು ಕಂಡುಕೊಂಡೆವು. ಇದಾದ ಬಳಿಕ ರಾಮದಾಸ್ನನ್ನು ಕಲ್ವಾದ ಮನೀಶಾ ನಗರದಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು. ಜನರನ್ನು ವಂಚಿಸಲು ಮತ್ತು ತ್ವರಿತವಾಗಿ ಹಣ ಸಂಪಾದಿಸಲು ಅವರು ಪೋಲೀಸ್ನಂತೆ ನಟಿಸಿರುವುದನ್ನು ಒಪ್ಪಿಕೊಂಡರು ಎಂದು ಮನೋಹರ್ ಅವ್ಹಾದ್ ಹೇಳಿದರು. (ಏಜೆನ್ಸೀಸ್)
ಹಬ್ಬದ ಮೆರವಣಿಗೆಯತ್ತ ನುಗ್ಗಿದ ಟ್ರಕ್: ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ, ಪ್ರಧಾನಿ ಮೋದಿ ಸಂತಾಪ
ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು
ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..