ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸುಶಾಂತ್ ಸಿಂಗ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದರಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗಿದ್ದು, ಈ ಕುರಿತಂತೆ ಮುಂಬೈ ಪೊಲೀಸ್ ಐದು ನಿರ್ಮಾಣ ಸಂಸ್ಥೆಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಚಿತ್ರರಂಗದ ಡರ್ಟಿ ಪಾಲಿಟಿಕ್ಸ್ ಬಿಚ್ಚಿಟ್ಟ ರವೀನಾ …
ಸುಶಾಂತ್ ಸಿಂಗ್ ಕಳೆದ ಆರು ತಿಂಗಳಲ್ಲಿ ಏಳು ಸಿನಿಮಾಗಳನ್ನು ಕಳೆದುಕೊಂಡಿದ್ದರು ಎಂದು ರಾಜಕಾರಣಿ ಸಂಜಯ್ ನಿರುಪಮ್ ಆರೋಪಿಸಿದ್ದರು. ಇನ್ನು ಧರ್ಮ ಪ್ರೊಡಕ್ಷನ್ಸ್ (ಕರಣ್ ಜೋಹಾರ್), ಯಶ್ರಾಜ್ ಫಿಲಂಸ್ (ಆದಿತ್ಯ ಚೋಪ್ರಾ), ಟಿ-ಸೀರೀಸ್ (ಭೂಷಣ್ ಕುಮಾರ್, ಬಾಲಾಜಿ ಎಂಟರ್ಟೈನ್ಮೆಂಟ್ (ಏಕ್ತಾ ಕಪೂರ್), ನಡಿಯಾಡ್ವಾಲಾ ಗ್ರಾಂಡ್ಸನ್ (ಸಾಜಿದ್ ನಡಿಯಾಡ್ವಾಲಾ) ಮತ್ತು ಸಲ್ಮಾನ್ ಖಾನ್ ಫಿಲಂಸ್ (ಸಲ್ಮಾನ್ ಖಾನ್) ಇತ್ತೀಚಿನ ದಿನಗಳಲ್ಲಿ ಸುಶಾಂತ್ ಅವರನ್ನು ದೂರ ಇಟ್ಟಿದ್ದರಿಂದ, ನೊಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕಮಾಲ್ ಟ್ವೀಟ್ ಮಾಡಿದ್ದರು.
ಕಮಾಲ್ ಖಾನ್ ಅವರ ಟ್ವೀಟ್ನಿಂದ ಸುಶಾಂತ್ ಅವರ ಅಭಿಮಾನಿಗಳು ಇಂದು ಪಾಟ್ನಾದಲ್ಲಿ ಸಲ್ಮಾನ್ ಖಾನ್ ಮತ್ತು ಕರಣ್ ಜೋಹಾರ್ ಅವರ ಪ್ರತಿಕೃತಿಯನ್ನು ದಹಿಸಿದರೆ, ಮೂಲದ ನ್ಯಾಯವಾದಿಯೊಬ್ಬರು ಎಂಟು ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಾವಿನಿಂದ ಮೈಲೇಜ್ ತಗೋಬೇಡಿ …
ಪ್ರಕರಣ ಈ ರೀತಿ ತಿರುವು ಪಡೆಯುತ್ತಿರುವುದರಿಂದ, ಮುಂಬೈ ಪೊಲೀಸ್ ಇದೀಗ ಐದು ನಿರ್ಮಾಣ ಸಂಸ್ಥೆಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸುಶಾಂತ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಯಾಕೆ ಅವಕಾಶ ಕೈತಪ್ಪಿತ್ತು, ಸುಶಾಂತ್ಗೂ ಮತ್ತು ಯಾರಾದರೂ ನಿರ್ಮಾಪಕರಿಗೆ ಜಗಳವಾಗಿತ್ತಾ ಎಂಬ ವಿಷಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಮೇಲೆ ಹೇಳಿದ ನಿರ್ಮಾಣ ಸಂಸ್ಥೆಗಳಲ್ಲಿ ಕೆಲವು ಮುಖ್ಯಸ್ಥರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಪೊಲೀಸರು, ಸುಶಾಂತ್ ಸ್ನೇಹಿತರು ಮತ್ತು ಕುಟುಂಬವರ್ಗದವರ ವಿಚಾರಣೆ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇನ್ನು ಸುಶಾಂತ್ ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ ವಶಕ್ಕೆ ಪಡೆದು, ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಿದ್ದಾರೆ. ಒಟ್ಟಾರೆ ತನಿಖೆಯ ಪ್ರಗತಿ ಜೋರಾಗಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಸುಶಾಂತ್ ಆತ್ಮಹತ್ಯೆ; ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್!