ಬೆಂಗಳೂರು: ಅತ್ತ ಉಪೇಂದ್ರ ‘ಯುಐ’ ಚಿತ್ರದ ನಟನೆ, ನಿರ್ದೇಶನದಲ್ಲಿ ಬಿಜಿಯಾಗಿದ್ದರೆ, ಇತ್ತ ಅದೇ ಶೀರ್ಷಿಕೆ ಹೋಲುವಂತಹ ‘ಆಪರೇಷನ್ ಯು’ ಎಂಬ ಚಿತ್ರವೊಂದು ಸೆಟ್ಟೇರಿದೆ. ಈ ಹಿಂದೆ ‘ಕನ್ನಡ ದೇಶದೊಳ್’ ಮತ್ತು “ಕಲಿವೀರ’ ಚಿತ್ರಗಳನ್ನು ನಿರ್ದೇಶಿಸಿದ್ದ ಅವಿರಾಮ್ ಕಂಠೀರವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ: PHOTOS| ಬಿಕಿನಿ ಧರಿಸಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ ನಟಿ ಪ್ರಣೀತಾ
ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿತು. ರಾಘವೇಂದ್ರ ರಾಜಕುಮಾರ್ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಅವರ ಪತ್ನಿ ಮಂಗಳಾ ರಾವೇಂದ್ರ ಚಿತ್ರಕ್ಕೆ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದರು.
‘ಆಪರೇಷನ್ ಯು’ ಬಗ್ಗೆ ಮಾತನಾಡುವ ನಿರ್ದೇಶಕ ಅವಿರಾಮ್, ‘ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಸಾಮಾನ್ಯ ಮನುಷ್ಯನನ್ನು ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಸಮಾಜವನ್ನು ಪ್ರೇರೇಪಿಸುವ ಪಾತ್ರದಲ್ಲಿ ನಟಿಸುತ್ತಿದ್ದು, ಅದು ವಿಶೇಷವಾಗಿರಲಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕರಾಗಿದ್ದು, ಅವರಿಗೆ ಸೋನಲ್ ಮೊಂಥೆರೋ ಮತ್ತು ಲಾಸ್ಯಾ ನಾಗರಾಜ್ ನಾಯಕಿಯರು. ಉಳಿದಂತೆ ರವಿಶಂಕರ್, ಅವಿನಾಶ್, ಮಾಳವಿಕಾ ಅವಿನಾಶ್, ಧರ್ಮ, ‘ಸ್ಪರ್ಶ’ ರೇಖಾ ಪ್ರಮುಖ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: 17ರಂದು ಕಬ್ಜ ಟೀಸರ್; ಉಪೇಂದ್ರ ಹುಟ್ಟುಹಬ್ಬಕ್ಕೆ ಚಂದ್ರ ಉಡುಗೊರೆ
‘ಆಪರೇಷನ್ ಯು’ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ, ಹಾಲೇಶ್ ಸಂಕಲನ ಇರಲಿದ್ದು, ಇದೇ ಅಕ್ಟೋಬರ್ ಮೊದಲ ವಾರದಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಪ್ರಾರಂಭವಾಗಲಿದೆ.
‘ಜೊತೆಜೊತೆಯಲಿ’ ತಂಡದ ಜತೆಗಿನ ಕಿರಿಕ್ ಬಳಿಕ ಬಿಗ್ಬಾಸ್-9 ಮನೆಯೊಳಕ್ಕೆ ಅನಿರುದ್ಧ್?