More

    ಸಾಮಾನ್ಯ ಮನುಷ್ಯನನ್ನು ಬಡಿದೆಬ್ಬಿಸಲಿರುವ ‘ಆಪರೇಷನ್​ ಯು’ …

    ಬೆಂಗಳೂರು: ಅತ್ತ ಉಪೇಂದ್ರ ‘ಯುಐ’ ಚಿತ್ರದ ನಟನೆ, ನಿರ್ದೇಶನದಲ್ಲಿ ಬಿಜಿಯಾಗಿದ್ದರೆ, ಇತ್ತ ಅದೇ ಶೀರ್ಷಿಕೆ ಹೋಲುವಂತಹ ‘ಆಪರೇಷನ್​ ಯು’ ಎಂಬ ಚಿತ್ರವೊಂದು ಸೆಟ್ಟೇರಿದೆ. ಈ ಹಿಂದೆ ‘ಕನ್ನಡ ದೇಶದೊಳ್​’ ಮತ್ತು “ಕಲಿವೀರ’ ಚಿತ್ರಗಳನ್ನು ನಿರ್ದೇಶಿಸಿದ್ದ ಅವಿರಾಮ್​ ಕಂಠೀರವ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ.

    ಇದನ್ನೂ ಓದಿ: PHOTOS| ಬಿಕಿನಿ ಧರಿಸಿ ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ನಟಿ ಪ್ರಣೀತಾ

    ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿತು. ರಾಘವೇಂದ್ರ ರಾಜಕುಮಾರ್​ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಅವರ ಪತ್ನಿ ಮಂಗಳಾ ರಾವೇಂದ್ರ ಚಿತ್ರಕ್ಕೆ ಫಸ್ಟ್​ ಕ್ಲಾಪ್​ ಮಾಡಿ ಶುಭ ಹಾರೈಸಿದರು.

    ‘ಆಪರೇಷನ್​ ಯು’ ಬಗ್ಗೆ ಮಾತನಾಡುವ ನಿರ್ದೇಶಕ ಅವಿರಾಮ್​, ‘ಇದೊಂದು ಸೈಕಲಾಜಿಕಲ್​ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ. ಸಾಮಾನ್ಯ ಮನುಷ್ಯನನ್ನು ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ರಾಘವೇಂದ್ರ ರಾಜಕುಮಾರ್​ ಅವರು ಸಮಾಜವನ್ನು ಪ್ರೇರೇಪಿಸುವ ಪಾತ್ರದಲ್ಲಿ ನಟಿಸುತ್ತಿದ್ದು, ಅದು ವಿಶೇಷವಾಗಿರಲಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.

    ಚಿತ್ರದಲ್ಲಿ ಉತ್ತಮ್​ ಪಾಲಿ, ಯಶ್​ ಶೆಟ್ಟಿ ನಾಯಕರಾಗಿದ್ದು, ಅವರಿಗೆ ಸೋನಲ್​ ಮೊಂಥೆರೋ ಮತ್ತು ಲಾಸ್ಯಾ ನಾಗರಾಜ್​ ನಾಯಕಿಯರು. ಉಳಿದಂತೆ ರವಿಶಂಕರ್​, ಅವಿನಾಶ್​, ಮಾಳವಿಕಾ ಅವಿನಾಶ್​, ಧರ್ಮ, ‘ಸ್ಪರ್ಶ’ ರೇಖಾ ಪ್ರಮುಖ ತಾರಾಗಣದಲ್ಲಿದ್ದಾರೆ.

    ಇದನ್ನೂ ಓದಿ: 17ರಂದು ಕಬ್ಜ ಟೀಸರ್; ಉಪೇಂದ್ರ ಹುಟ್ಟುಹಬ್ಬಕ್ಕೆ ಚಂದ್ರ ಉಡುಗೊರೆ

    ‘ಆಪರೇಷನ್​ ಯು’ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ, ಹಾಲೇಶ್​ ಸಂಕಲನ ಇರಲಿದ್ದು, ಇದೇ ಅಕ್ಟೋಬರ್​ ಮೊದಲ ವಾರದಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಪ್ರಾರಂಭವಾಗಲಿದೆ.

    ‘ಜೊತೆಜೊತೆಯಲಿ’ ತಂಡದ ಜತೆಗಿನ ಕಿರಿಕ್​ ಬಳಿಕ ಬಿಗ್​ಬಾಸ್​-9 ಮನೆಯೊಳಕ್ಕೆ ಅನಿರುದ್ಧ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts