ಮುಧೋಳ: ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತರಾಗಿದ್ದ ನಗರದ ಗಿರಗಾಂವ ಪುನರ್ವಸತಿ ಕೇಂದ್ರದ ನಿವಾಸಿ ಲಕ್ಷ್ಮಣ ಶೇಖಪ್ಪ ಅಂಬಿಗೇರ (31) ಸೋಮವಾರ ಅಕಾಲಿಕವಾಗಿ ನಿಧನರಾದರು. ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಗಿರಗಾಂವ ಪು.ಕೇ.ದಲ್ಲಿ ರೇಣುಕಾದೇವಿ ನಾಟ್ಯ ಸಂಘ ಸ್ಥಾಪನೆ ಜತೆಗೆ ಜೈ ಕರ್ನಾಟಕ ಸಂಸ್ಥೆಯ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಹಲವಾರು ಕಲಾವಿದರನ್ನು ಪೋಷಿಸಿದ್ದಾರೆ. ಹಲವಾರು ಚಲನಚಿತ್ರಗಳು, ಜೀ ಕನ್ನಡ ವಾಹಿನಿಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.