More

    ವರ್ಗಾವಣೆಗೊಂಡ ನೌಕರರನ್ನು ಬಿಡುಗಡೆ ಮಾಡಬೇಡಿ

    ಮುದ್ದೇಬಿಹಾಳ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಆಡಳಿತ ಸುಗಮವಾಗಿ ಸಾಗಲು ಈಗಾಗಲೇ ವರ್ಗಾವಣೆಗೊಂಡಿರುವ ಇಬ್ಬರು ನೌಕರರನ್ನು ಬಿಡುಗಡೆ ಮಾಡದಂತೆ ಕೆಲ ಸಾರ್ವಜನಿಕರು ಪಪಂ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

    ಪಪಂ ನೌಕರರಾದ ಅನೀಲ ಚಟ್ಟೇರ, ಚಂದ್ರಶೇಖರ ಸಗರ ಅವರನ್ನು ಬಿಡುಗಡೆಗೊಳಿಸದಂತೆ ವಿನಂತಿಸುತ್ತೇವೆ. ಒಂದು ವೇಳೆ ಬಿಡುಗಡೆ ಮಾಡಿದರೆ ಉಪವಾಸ ಸತ್ಯಾಗ್ರಹ ಹೂಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸಲ್ಲಿಸಿದ ಮನವಿಗೆ ಇಪ್ಪತ್ತಕ್ಕೂ ಹೆಚ್ಚು ಜನ ಸಹಿ ಮಾಡಿದ್ದಾರೆ. ಪಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ ಮನವಿ ಪತ್ರ ಸ್ವೀಕರಿಸಿದರು.

    ಪತ್ರಕರ್ತನಿಗೆ ಶಸಚಿಕಿತ್ಸೆ
    ಆ.14 ರಂದು ಕುಡಿವ ನೀರು ಶುದ್ಧೀಕರಣ ಘಟಕದಲ್ಲಿ ಪಪಂ ಸಿಬ್ಬಂದಿ ಬಾಡೂಟ ಮಾಡುತ್ತಿರುವ ವಿಷಯ ತಿಳಿದು ವರದಿಗೆಂದು ತೆರಳಿದ್ದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಸ್ಥಳೀಯ ಪತ್ರಕರ್ತ ಕಾಶೀನಾಥ ಬಿರಾದಾರ ಅವರಿಗೆ ಬಲಭುಜಕ್ಕೆ ಶಸ ಚಿಕಿತ್ಸೆ ಮಾಡಲಾಗಿದೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಹತ್ತು ದಿನಗಳಿಂದ ದಾಖಲಾಗಿದ್ದರು. ಅವರಿಗೆ ವೈದ್ಯರು ಶಸಚಿಕಿತ್ಸೆ ಮಾಡಿದ್ದು, ದೇಹದಲ್ಲಿ ಪ್ಲೇಟ್ ಅಳವಡಿಸಿದ್ದಾರೆ. ಪತ್ರಕರ್ತ ಕಾಶೀನಾಥ ಆರೋಗ್ಯ ಸ್ಥಿತಿ ಬಗ್ಗೆ ಮಾನವೀಯತೆ ದೃಷ್ಟಿಯಿಂದಲಾದರೂ ಸಹಾನುಭೂತಿ ತೋರಬೇಕಿದ್ದ ಅಧಿಕಾರಿಗಳು, ಪಾರ್ಟಿ ಮಾಡಿರುವ ಸಿಬ್ಬಂದಿ ರಕ್ಷಣೆಗೆ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts