More

    ಹೊಕ್ರಾಣಿಯ ವ್ಯಕ್ತಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಬಂಧನ

    ಮುದ್ದೇಬಿಹಾಳ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ವಿಷಯವಾಗಿ ಉಂಟಾಗಿದ್ದ ಜಗಳದಲ್ಲಿ ಓರ್ವ ಕೊಲೆಗೀಡಾದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಏನಿದು ಪ್ರಕರಣ:
    ತಾಲೂಕಿನ ಹೊಕ್ರಾಣಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅದೇ ಗ್ರಾಮದ ಗುರಪ್ಪ ಕರಕಪ್ಪ ಜಗಲಿ ಎಂಬಾತ ಅಕ್ರಮ ಸಂಬಂಧ ಇರಿಸಿಕೊಂಡಿದ್ದನೆಂದು ಹೇಳಲಾಗಿದೆ. ಅಲ್ಲದೆ ಅದೇ ಗ್ರಾಮದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ರಹೆಮಾನ್ ಗುರಿಕಾರ ಎಂಬಾತ ಆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದನೆಂದು ಹೇಳಲಾಗಿದೆ. ಇದನ್ನು ತಿಳಿದ ಗುರಪ್ಪ ಜಗಲಿ, ರಹೆಮಾನ್‌ನೊಂದಿಗೆ ಇದೇ ವಿಷಯವಾಗಿ ಜಗಳಮಾಡಿ ರಹೆಮಾನ್‌ಗೆ ನಿಂದಿಸಿದ್ದಾನೆ ಎನ್ನಲಾಗಿದೆ.

    ಇದರಿಂದ ಕೋಪಗೊಂಡಿದ್ದ ರಹೆಮಾನ್ ತನ್ನ ಮತ್ತಿಬ್ಬರು ಸ್ನೇಹಿತರಾದ ಶರಣಪ್ಪ ಜಗಲಿ, ಬೀರಪ್ಪ ಮುರಾಳ ಅವರೊಂದಿಗೆ ಸೇರಿ ಗುರಪ್ಪನನ್ನು ಕೊಲೆ ಮಾಡಿ ಢವಳಗಿ ಸಮೀಪದ ಹಳ್ಳೂರ ಸೀಮೆಯಲ್ಲಿನ ಸೇತುವೆ ಕೆಳಗಡೆ ಶವ ಬೀಸಾಕಿ ತಲೆ ಮರೆಸಿಕೊಂಡಿದ್ದರು. ಖಚಿತ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರ ಮಾರ್ಗದರ್ಶನದಲ್ಲಿ ಬ. ಬಾಗೇವಾಡಿ ಡಿವೆಎಸ್ಪಿ ಈ. ಶಾಂತವೀರ ನೇತೃತ್ವದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಅವರೊಂದಿಗೆ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮುದ್ದೇಬಿಹಾಳ ಠಾಣೆ ಸಿಬ್ಬಂದಿ ಆರ್.ಎಸ್. ಪಾಟೀಲ, ಸಂಜಯ ಪಿ. ಜಾಧವ, ತಾಳಿಕೋಟಿ ಠಾಣೆ ಸಿಬ್ಬಂದಿ ಶಿವನಗೌಡ ಬಿರಾದಾರ, ಸಂಗಮೇಶ ಚಲವಾದಿ, ಶಿವಾನಂದ ಮಟ್ಟಿಹಾಳ, ಸಂಗನಗೌಡ ಬಿರಾದಾರ ತಂಡದಲ್ಲಿದ್ದರು. ಶಾಂತಗೌಡ ಬನ್ನೆಟ್ಟಿ, ಕೆ.ಎಸ್. ಅಸ್ಕಿ, ವೀರಣ್ಣ ಅಜ್ಜೇನವರ, ಸಿ.ಬಿ. ಕುಲಕರ್ಣಿ ಮತ್ತಿತರರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts