More

    ಮಾಜಿ ಶಾಸಕ ನಾಡಗೌಡರ ಜನ್ಮದಿನಾಚರಣೆ

    ಮುದ್ದೇಬಿಹಾಳ: ಮಾಜಿ ಶಾಸಕ ಸಿ.ಎಸ್. ನಾಡಗೌಡರ 63ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

    ಯರಝರಿ ಜಿಪಂ ಕ್ಷೇತ್ರದ ಮುಖಂಡ ಸಂತೋಷ ಚವಾಣ್ (ಹುಲ್ಲೂರ) ನೇತೃತ್ವದಲ್ಲಿ ನಾಡಗೌಡರ ಹೆಸರಿನಲ್ಲಿ ಯಲಗೂರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಸಲಾಯಿತು.

    ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಡಗೌಡ (ಚಿನ್ನುಧಣಿ), ಗುತ್ತಿಗೆದಾರ ಶ್ಯಾಮ್ ಪಾತ್ರದ, ಎಂ.ಕೆ. ಮುತ್ತಣ್ಣವರ, ಮುತ್ತಣ್ಣ ರಾಠೋಡ ಪಾಲ್ಗೊಂಡಿದ್ದರು.

    ಮಾಸ್ಕ್, ಹಣ್ಣು, ಸಿಹಿ ವಿತರಣೆ
    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಜ್ದೂರ್ ಕಾಂಗ್ರೆಸ್ ಹಾಗೂ ಸಮಸ್ತ ನಾಡಗೌಡರ ಅಭಿಮಾನಿ ಬಳದಿಂದ ಆಸ್ಪತ್ರೆಯಲ್ಲಿದ್ದ ಬಾಣಂತಿಯರು, ರೋಗಿಗಳು, ನರ್ಸ್‌ಗಳಿಗೆ ಹಾಗೂ ಸಿಬ್ಬಂದಿಗೆ ಹಣ್ಣು, ಸಿಹಿ ವಿತರಿಸಿದರು.

    ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಡಗೌಡ ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಮುಖಂಡ ಸಚಿನ್‌ಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್‌ರಫೀಕ್ ಶಿರೋಳ, ಲಕ್ಷ್ಮಣ ಲಮಾಣಿ, ಅಶೋಕ ಅಜಮನಿ, ಶರಣು ಚಲವಾದಿ, ಮಹಿಬೂಬ ಮೊಕಾಶಿ, ದಾದಾ ಗೊಳಸಂಗಿ, ಬಾಪು ಢವಳಗಿ ಮತ್ತಿತರರು ಇದ್ದರು.

    ಶುಭಕೋರಿದ ಶಾಸಕ ನಡಹಳ್ಳಿ
    ಮಾಜಿ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಕರ್ನಾಟಕ ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಶು ಕೋರಿದ್ದಾರೆ. ಶಾಸಕರ ಅಧಿಕೃತ ೇಸ್‌ಬುಕ್ ಖಾತೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಮಾಜಿ ಶಾಸಕರಾದ ಸಿ.ಎಸ್. ನಾಡಗೌಡ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಉಭಯ ನಾಯಕರ ಭಾವಚಿತ್ರಗಳನ್ನು ಹಾಕಿ ಪೋಸ್ಟ್ ಮಾಡಲಾಗಿದೆ. ಅದನ್ನು ಎರಡು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts