More

    ದುಡಿವ ವರ್ಗಕ್ಕೆ ಕೇಂದ್ರದ ಕೊಡುಗೆ ಅಪಾರ

    ಕನಕಗಿರಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ತಾಲೂಕಿನ ಚಿಕ್ಕಮಾದಿನಾಳ ಹಾಗೂ ಬಸರಿಹಾಳ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಬಡ ಹಾಗೂ ಮಧ್ಯಮ ವರ್ಗಕ್ಕೆ ಬಡ್ಡಿ ರಹಿತ ಸಾಲ, ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸುಸ್ತಿ ಸಾಲ ಮನ್ನಾ, ಉಜ್ವಲ, ಸುಕನ್ಯಾ ಸಮೃದ್ಧಿ, ಗ್ರಾಮೀಣ ಭಾಗದ ಜನರ ಉದ್ಧಾರಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಕರೊನಾ ಸಂದರ್ಭದಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಬಗ್ಗೆ ಚರ್ಚಿಸುತ್ತಿರುವಾಗ ಲಸಿಕೆ ನೀಡಿ ಭಾರತೀಯರನ್ನು ರಕ್ಷಿಸಿಕೊಂಡು ಅನ್ಯ ರಾಷ್ಟ್ರಗಳು ಬಾಯಿಗೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿಯವರದಾಗಿದೆ. ದೇಶದ ಅಭಿವೃದ್ಧಿಗಾಗಿ ದಿನಕ್ಕೆ 18 ಗಂಟೆ ಸಮಯ ಕಾಯ್ದಿರಿಸಿರುವ ವಿಶ್ವ ನಾಯಕ ನರೇಂದ್ರ ಮೋದಿ, ತಮ್ಮ ಆಡಳಿತದಲ್ಲಿ ಈಡೀ ವಿಶ್ವವೆ ಭಾರತ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.

    ಪ್ರಧಾನಿಯವರ ಆಶಯದಂತೆ ಹಲವು ಜನಪರ ಯೋಜನೆಗಳಿಂದ ಭಾರತ ವಿಕಾಸದತ್ತ ಸಾಗಿದೆ. ಕೇಂದ್ರದ ಸಾಧನೆಗಳನ್ನು ಮನೆ-ಮನಗಳನ್ನು ತಲಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ಪ್ರಮುಖರಾದ ಶ್ರೀಧರ ಕೇಸರಹಟ್ಟಿ, ನರಸಿಂಗರಾವ್ ಕುಲಕರ್ಣಿ, ವಾಗೀಶ ಹಿರೇಮಠ, ತಿಪ್ಪಣ್ಣ ಗಿಡ್ಡಿ, ವೆಂಕಟೇಶ ಉಪ್ಪಾರ, ಮರಿಯಪ್ಪ ತಿದಿ, ಗುರುಶಾಂತಪ್ಪ ಉಪ್ಪಾರ, ಹುಲುಗಪ್ಪ ಹಿರೇಮಾದಿನಾಳ, ಶಿವಪ್ಪ ಸುಳೇಕಲ್, ಹುಲಿಗೆಮ್ಮ ನಾಯಕ ಇತರರಿದ್ದರು.

    ಗ್ಯಾರಂಟಿಗಳಿಂದ ಸ್ವಪಕ್ಷದವರಿಗೆ ಬೇಸರ

    ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆಯಲ್ಲದೇ, ಸ್ವಪಕ್ಷದವರ(ಕಾಂಗ್ರೆಸ್) ಬೇಸರಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಸರ್ಕಾರ ಮುಜುಗರಕ್ಕೊಳಗಾಗುವುದು ಶತಸಿದ್ಧ.
    ಬಸವರಾಜ ದಢೇಸುಗೂರು
    ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts