ಬೆಂಗಳೂರು: ಕೋವಿಡ್ ಸೋಂಕು ರಾಜ್ಯ ರಾಜಧಾನಿಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿದ್ದು, ನಗರ ನಿವಾಸಿಗಳಾದಿಯಾಗಿ ಸಣ್ಣಪುಟ್ಟ ವ್ಯಾಪಾರಿಗಳೂ ಬೆಚ್ಚಿಬಿದ್ದಿದ್ದಾರೆ. ಮಹಾಮಾರಿ ಸೋಂಕು ಹರಡುವಿಕೆ ನಿಯಂತ್ರಣದ ನಿಟ್ಟಿನಲ್ಲಿ ನಗರದ ಬಹುತೇಕ ಮಾರುಕಟ್ಟೆಗಳು ಜು. 6ರವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿವೆ.
ಇನ್ನೂ ಒಂದು ವಾರ ಬಹುತೇಕ ಮಾರುಕಟ್ಟೆಗಳು ಬಂದ್ ಆಗಲಿದ್ದು, ಪರ್ಯಾಯ ಕ್ರಮಕ್ಕೆ ವ್ಯಾಪಾರಸ್ಥರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಸಿಂಗೇನ ಅಗ್ರಹಾರ ಹಣ್ಣಿನ ಮಾರುಕಟ್ಟೆ, ಮಲ್ಲೆಶ್ವರ ಆಸುಪಾಸಿನ ಪ್ರದೇಶಗಳ ವಾಣಿಜ್ಯ ವಹಿವಾಟು, ಡಿವಿಜಿ ರಸ್ತೆ, ಗಾಂಧಿ ಬಜಾರ್ನ ಮಳಿಗೆಗಳು ಬಂದ್ ಆಗಿದೆ. ಜೂ.6ರ ನಂತರ ಕೆಲ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ವಹಿವಾಟು ನಡೆಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಇದನ್ನೂ ಓದಿರಿ video/ ಶವವನ್ನು ದರದರನೆ ಎಳೆತಂದು ಗುಂಡಿಗೆ ಎಸೆಯುತ್ತಾರೆ… ಕರ್ನಾಟಕದಲ್ಲಿ ಮಣ್ಣಾಯ್ತಾ ಮಾನವೀಯತೆ?
ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ ಸುತ್ತಲಿನ ಪ್ರದೇಶ, ಅವೆನ್ಯೂ ರಸ್ತೆ ಅಕ್ಕಪಕ್ಕದ ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಜು.6ರ ನಂತರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎ. ರಮೇಶ್ ತಿಳಿಸಿದ್ದಾರೆ.
ಚಿಕ್ಕಪೇಟೆ ಸುತ್ತಲಿನ ಜ್ಯುವೆಲ್ಲರಿ, ಬಟ್ಟೆ ವ್ಯಾಪಾರಿಗಳು ಹಾಗೂ ಹಲವು ವರ್ತಕರ ಸಂಘಟನೆಗಳು ಸ್ವಯಂಪ್ರೇರಿತ ಬಂದ್ಗೆ ಸಹಕಾರ ನೀಡಿವೆ. ಹೊಸ ತರಗುಪೇಟೆ ವರ್ತಕರ ಸಂಘ ಜು.6 ನಂತರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಹೊರತು ಪಡಿಸಿ, ಉಳಿದ ದಿನ ಮಾರುಕಟ್ಟೆ ಬಂದ್ ಮಾಡಲು ನಿರ್ಧರಿಸಿದೆ. ಸಂಘದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಹಿವಾಟು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎನ್.ಟಿ. ಪೇಟೆ ವರ್ತಕರ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.
ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿನ ಮಳಿಗೆ ವರ್ತಕರಿಗೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಕೆಲ ಮಳಿಗೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಜು.6ರ ನಂತರ ವಾರದಲ್ಲಿ 3 ದಿನ (ಮಂಗಳವಾರ, ಗುರುವಾರ, ಶನಿವಾರ) ವಹಿವಾಟು ನಡೆಸಲು ಬೇಳೆ ಕಾಳು ಹಾಗೂ ದಿನಸಿ ಪದಾರ್ಥಗಳ ವರ್ತಕರ ಸಂಘ ನಿರ್ಧರಿಸಿದೆ.
ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್ ಸೋಂಕು!