More

    ಹೆಚ್ಚು ಕಬ್ಬು ನುರಿಸುವ ಗುರಿ

    ಬೋರಗಾಂವ: ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಜೈನಾಪುರದ ಅರಿಹಂತ ಸಕ್ಕರೆ ಕಾರ್ಖಾನೆಯು ಈ ವರ್ಷದ ಹಂಗಾಮಿನಲ್ಲಿ ಕಬ್ಬು ನುರಿಸಲು ಕಾರ್ಖಾನೆ ಚೇರ್ಮನ್ ಅಭಿನಂದನ ಪಾಟೀಲ ಎಲ್ಲ ಸಿದ್ಧತೆ ಕೈಗೊಂಡಿದ್ದಾರೆ. ಹೆಚ್ಚು ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಪಿಕೆಪಿಎಸ್ ಚೇರ್ಮನ್ ಉತ್ತಮ ಪಾಟೀಲ ಹೇಳಿದ್ದಾರೆ. ಸಮೀಪದ ಜೈನಾಪುರ ಗ್ರಾಮದಲ್ಲಿ ಭಾನುವಾರ ಅರಿಹಂತ ಶುಗರ್ಸ್‌ನ ರೋಲರ್ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಹಿತಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯಕ್ಕೆ ಮಾದರಿ ಮಾಡುವ ಗುರಿ ಇದೆ. ಹಂಗಾಮು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ಪೃಥ್ವಿರಾಜ ಪಾಟೀಲ, ಚಂದು ಪಾಟೀಲ, ಕಾರ್ಖಾನೆ ಸಿಇಒ ಆರ್.ಕೆ.ಶೆಟ್ಟಿ, ಕೃಷಿ ಅಧಿಕಾರಿ ಎಸ್.ಎ.ಚೌಗುಲಾ, ಅಭಿಯಂತ ಸುಜಯ ಕುಯಿಕ್, ಧನಂಜಯ ಬಲವಾನ, ಅನಿಲ ಕಲಾಜೆ, ಸನತ್ ಗಣಿ, ವೃಷಭ ಬಲ್ಲೋಳ, ಅಭಿಷೇಕ ಚೌಗುಲಾ, ರಾಜವರ್ಧನ ಬಿರಾದಾರ, ಭರಮು ಪಾಟೀಲ ಹಾಗೂ ಕಾರ್ಖಾನೆಯ ಎಲ್ಲ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts