ಮೊಳಕಾಲ್ಮೂರು: ತಾಲೂಕಿನ ಕಾಟನಾಯಕಹಳ್ಳಿಗೆ ಶನಿವಾರ ರಾಷ್ಟ್ರೀಯ ವೈದ್ಯಕೀಯ ಸಂಶೋಧನ ಸಂಸ್ಥೆಯ ತಂಡ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ 40 ಜನರ ರಕ್ತ ಮಾದರಿ ಸಂಗ್ರಹಿಸಿತು.
ಪರಸ್ಪರ ಅಂತರ ಕಾಯ್ದುಕೊಂಡು ನಾಲ್ಕು ಕ್ಲಸ್ಟರ್ ಹಂತದಲ್ಲಿ 40 ಮನೆಗಳಿಗೆ ಭೇಟಿ ನೀಡಿದ ವೈದ್ಯರ ತಂಡ ರಕ್ತ ಮಾದರಿ ಸಂಗ್ರಹಿಸಿತು.
ತಂತ್ರಜ್ಞ ಜಾಕೀರ್, ಪುರುಷ ಆರೋಗ್ಯ ಸಹಾಯಕ ಅಶೋಕ್, ತಾಲೂಕು ವೈದ್ಯಾಧಿಕಾರಿ ಡಾ.ಪದ್ಮಾ, ಡಾ.ರಮೇಶ್, ಡಾ.ವಿಶ್ವಾಸ್, ಸಿಪಿಐ ಗೋಪಾಲನಾಯ್ಕ, ಪಿಎಸ್ಐ ಎನ್.ಕೆ.ಬಸವರಾಜ್, ಪಿಡಿಒ ಕೆಂಚಪ್ಪ, ಕಂದಾಯ ಅಧಿಕಾರಿ ವಾಲೇಕರ್, ಸಮೀಕ್ಷೆ ಸಿಬ್ಬಂದಿ ಚಿದಾನಂದ್, ರೆಹಮಾನ್, ಶಾಂತಕುಮಾರ್, ಮಂಜುಳಾ ಇದ್ದರು.