ಆಲೂರು: ಕಾಡಾನೆಗಳ ಹಿಂಡು ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ ತಾಲೂಕಿನ ಪಾಳ್ಯ ಹೋಬಳಿಯ ಬಲ್ಲೂರು ಪುರಕ್ಕೆ ಶಾಸಕ ಸಿಮೆಂಟ್ ಮಂಜು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ರೈತರಾದ ಕಾಂತರಾಜ್, ಚಂದ್ರಪ್ಪ ಎಂಬುವರ ಜಮೀನಿಗೆ ಕಾಡಾನೆಗಳ ಗುಂಪು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿದರಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸುವುದರ ಜತೆಗೆ ಪರಿಹಾರ ಕೊಡಿಸಬೇಕು ಎಂದು ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಮೆಂಟ್ ಮಂಜು, ತಾಲೂಕಿನ ಕೆ.ಹೊಸಕೋಟೆ, ಕುಂದೂರು ಹಾಗೂ ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪು ಸೋಲಾರ್ ಬೇಲಿ ಮುರಿದು ಜಮೀನಿನಲ್ಲಿದ್ದ ನೀರಿನ ಪೈಪ್ ಹಾಗೂ ಮುಸುಕಿನ ಜೋಳವನ್ನು ನಾಶ ಮಾಡಿವೆ. ಸರ್ಕಾರ ಕೂಡಲೇ ಈಬಗ್ಗೆ ಗಮನಹರಿಸಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಶಿಧರ್, ಆರ್ಎಸ್ಎಸ್ ಮುಖಂಡರಾದ ಚೇತನ್, ದಿನೇಶ್, ವಿಕಾಸ್ಗೌಡ, ರೈತ ಕಾಂತರಾಜು, ಚಂದ್ರಪ್ಪ ಇತರರಿದ್ದರು.