More

    ಕಾಂಗ್ರೆಸ್ ಕೈ ಕೊಟ್ಟರೆ ಅನ್ಯಪಕ್ಷದಿಂದ ಕಣಕ್ಕೆ; ಶಾಸಕ ಡಿ.ಎಸ್.ಹೂಲಗೇರಿ

    ಹಟ್ಟಿಚಿನ್ನದಗಣಿ: ಜೋಗೇರದೊಡ್ಡಿಯಲ್ಲಿ ನಿರ್ಮಿಸುವ ಬ್ಯಾರೇಜ್‌ನಿಂದ ವರ್ಷ ಪೂರ್ತಿ ಹಳ್ಳದ ನೀರು ಹರಿಯಲಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬ್ರಿಡ್ಜ್ ಮೂಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಲು ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.


    ರಾಯದುರ್ಗ ಬಳಿಯ ಜೋಗೇರದೊಡ್ಡಿಯ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯ ಟಿಎಸ್‌ಪಿಯ 2 ಕೋಟಿ ರೂ.ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಶುಕ್ರವಾರ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸಿಗುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಅನ್ಯ ಪಕ್ಷದ ಮೂಲಕ ಕಣದಲ್ಲಿರುವುದು ನಿಶ್ಚಿತ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts