More

    ತಾನಾಗಿಯೇ ಒಡೆಯುವ ತೆಂಗಿನಕಾಯಿ: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ದೇವರ ಪವಾಡ ವಿಡಿಯೋ ವೈರಲ್​

    ಭುವನೇಶ್ವರ: ಒಡಿಶಾದ ಬೌದ್​ ಜಿಲ್ಲೆಯ ಬಿಲಾಸ್ಪುರ್​ ಪಂಚಾಯಿತಿಯ ಬದರಾಹಜುರ್​ ಗ್ರಾಮದ ಪೂರ್ಣಬಾಷಿ ದೇವಸ್ಥಾನವು ತನ್ನ ಪವಾಡದಿಂದಲೇ ತುಂಬಾ ಹೆಸರುವಾಸಿಯಾಗಿದೆ.

    ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಬರುವ ಭಕ್ತರು ದೇವತೆಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಅಚ್ಚರಿ ಏನೆಂದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿ ಅದಾಗಿಯೇ ಒಡೆದು ಹೋಗುತ್ತದೆ.

    ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಕೊಟ್ಟರೆ ಪೂಜಾರಿಗಳು ಕಲ್ಲಿನ ಮೇಲೆ ಒಡೆದು, ಎರಡು ಹೋಳು ಮಾಡಿ, ದೇವರಿಗೆ ಅರ್ಪಿಸಿ, ವಾಪಸ್​ ಕೊಡುತ್ತಾರೆ. ಆದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ದೇವರ ಮುಂದೆ ಇಡಲಾಗುತ್ತದೆ. ವಾಪಸ್​ ಕೊಡುವಾಗ ತೆಂಗಿನಕಾಯಿ ತಾನಾಗಿಯೇ ಒಡೆದಿರುತ್ತದೆ.

    ಈ ದೇವಸ್ಥಾನದಲ್ಲಿ ಕೀರಾಭಿಷೇಕ, ಜಲ ಅಭಿಷೇಕಕ್ಕೂ ಹೆಸರುವಾಸಿಯಾಗಿದ್ದು, ಕಳೆದ 40 ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಮನದಲ್ಲಿ ಅಂದುಕೊಂಡಿದ್ದನ್ನು ದೇವರು ಈಡೇರಿಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ. (ಏಜೆನ್ಸೀಸ್​)

    ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ: ಮಾಜಿ ಸಿಎಂ ಎಚ್​ಡಿಕೆ ವಿರೋಧ

    ತಮನ್ನಾ ಮದುವೆಯಂತೆ! ಅಭಿಮಾನಿಗಳಿಗೆ ಹುಡುಗನ ದರ್ಶನ ಮಾಡಿಸಿದ ನಟಿ

    ‘ಭಾಗ್ಯವಂತ’ರೊಂದಿಗೆ ‘ಸಾಂಗ್ಲಿಯಾನ’; ಈ ವಾರ 7 ಚಿತ್ರಗಳ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts