ಭುವನೇಶ್ವರ: ಒಡಿಶಾದ ಬೌದ್ ಜಿಲ್ಲೆಯ ಬಿಲಾಸ್ಪುರ್ ಪಂಚಾಯಿತಿಯ ಬದರಾಹಜುರ್ ಗ್ರಾಮದ ಪೂರ್ಣಬಾಷಿ ದೇವಸ್ಥಾನವು ತನ್ನ ಪವಾಡದಿಂದಲೇ ತುಂಬಾ ಹೆಸರುವಾಸಿಯಾಗಿದೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಬರುವ ಭಕ್ತರು ದೇವತೆಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಅಚ್ಚರಿ ಏನೆಂದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿ ಅದಾಗಿಯೇ ಒಡೆದು ಹೋಗುತ್ತದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಕೊಟ್ಟರೆ ಪೂಜಾರಿಗಳು ಕಲ್ಲಿನ ಮೇಲೆ ಒಡೆದು, ಎರಡು ಹೋಳು ಮಾಡಿ, ದೇವರಿಗೆ ಅರ್ಪಿಸಿ, ವಾಪಸ್ ಕೊಡುತ್ತಾರೆ. ಆದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ದೇವರ ಮುಂದೆ ಇಡಲಾಗುತ್ತದೆ. ವಾಪಸ್ ಕೊಡುವಾಗ ತೆಂಗಿನಕಾಯಿ ತಾನಾಗಿಯೇ ಒಡೆದಿರುತ್ತದೆ.
ಈ ದೇವಸ್ಥಾನದಲ್ಲಿ ಕೀರಾಭಿಷೇಕ, ಜಲ ಅಭಿಷೇಕಕ್ಕೂ ಹೆಸರುವಾಸಿಯಾಗಿದ್ದು, ಕಳೆದ 40 ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಮನದಲ್ಲಿ ಅಂದುಕೊಂಡಿದ್ದನ್ನು ದೇವರು ಈಡೇರಿಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ. (ಏಜೆನ್ಸೀಸ್)
ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ: ಮಾಜಿ ಸಿಎಂ ಎಚ್ಡಿಕೆ ವಿರೋಧ