More

    ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುವ ಪಕ್ಷ, ಸಚಿವ ಸಂತೋಷ ಲಾಡ್ ಟೀಕೆ

    ಕಲಘಟಗಿ: ಬಿಜೆಪಿ ಪಕ್ಷ ಪ್ರಚಾರ ಗಿಟ್ಟಿಸಿಕೊಳ್ಳುವ ಪಕ್ಷ. ಕಾಂಗ್ರೆಸ್ ಪಕ್ಷ ಜನಸೇವೆ ಮಾಡುವ ಪಕ್ಷ. ಆದ್ದರಿಂದ ಜನಸಾಮಾನ್ಯರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ ಧಾರವಾಡ ಜಿಲ್ಲೆಯ ಮರಿ ಟಗರು ವಿನೋದ ಅಸೂಟಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಕಾರ್ವಿುಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ನರೇಂದ್ರ ಮೋದಿ ಅವರೇ ಬಡವರಿಗೆ ಕೊಟ್ಟ ಮಾತಿನಂತೆ 15 ಲಕ್ಷ ರೂ. ಕೊಟ್ಟ ಪಾಸ್​ಬುಕ್ ತೋರಿಸಿ, ಬಿಜೆಪಿ ಆಡಳಿತದಲ್ಲಿ ಕೊಟ್ಟ ರೈತರ ಸಾಲಮನ್ನಾ ಭರವಸೆ ಹುಸಿಯಾಗಿದೆ. ಯುವಕರಿಗೆ ಉದ್ಯೋಗ ಕೊಡಿಸ್ತೀವಿ ಅಂತ ಸುಳ್ಳು ಹೇಳಿದ್ದಾರೆ. ಬಿಜೆಪಿ ಭರವಸೆ ನೀಡಿದ್ದೆಲ್ಲವೂ ಸುಳ್ಳು. ಆದರೆ, ಕಾಂಗ್ರೆಸ್ ಪಕ್ಷ ಹೀಗೆ ಮಾಡಿಲ್ಲ. ನುಡಿದಂತೆ ನಡೆದಿದ್ದೇವೆ. ಅನ್ನಭಾಗ್ಯ,ಆಶಾ ಕಾರ್ಯಕರ್ತರು. ಅಂಗವಿಕಲರ ಮಾಸಾಶನ. ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅಕ್ಕಿ ಬದಲು ಹಣ ಹೀಗೆ ಹತ್ತು ಹಲವು ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಕೊಟ್ಟಿದೆ ಎಂದರು.

    ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಸಂತೋಷ ಲಾಡ್ ಅವರು ಬೆನ್ನೆಲುಬಾಗಿ ಧೈರ್ಯ ತುಂಬುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಣ್ಣ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ಬಂದಿರುವ ನನಗೆ ಇಂದು ಲೋಕಸಭೆ ಟಿಕೆಟ್ ನೀಡಿದೆ ಎಂದರು.

    ಮಾಜಿ ಶಾಸಕ ಎಂ.ಎಸ್. ಅಕ್ಕಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಮಯೂರ ಮೋರೆ, ಮಲ್ಲನಗೌಡರ, ವಿಜಯಗೌಡರ, ಬಸಣ್ಣ ಬಸರೀಕಟ್ಟಿ, ಸುರೇಶಗೌಡ ಕರಿಗೌಡರ, ನರೇಶ ಮಲೆನಾಡು, ಅಜ್ಮತ ಜಾಗೀರದಾರ, ಗಿರಿಜಾ ಹೂಗಾರ, ಮಹೇಶ ಅಲಗೂರ, ಕವಿತಾ ರೆಡ್ಡಿ, ಮಾಲಾ ತುರಿಹಾಳ, ಮಂಜುಳಾ ದೇವಲಾಪುರ, ಬಾಬಣ್ಣ ಅಂಚಟಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts