ಆಂಧ್ರ ಪ್ರದೇಶ: ಸದ್ಯ, ದೇಶಾದ್ಯಂತ ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ಬೆಲೆ ಕಡಿತ ಎಂಬ ವಿಚಾರದ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ತೆಲುಗು ಸಿನಿಮಾ ನಟರು ಜಗನ್ ಮೋಹನ್ ರೆಡ್ಡಿಯ ಸರ್ಕಾರದ ವಿರುದ್ಧ ಹಗುರವಾದ ಮಾತುಗಳನ್ನಾಡುವುದು, ನಂತರ ಅದಕ್ಕೆ ಜಗನ್ ಸರ್ಕಾರದ ಸಚಿವರು ಟಾಂಗ್ ಕೊಡುವುದು, ಈ ಎಲ್ಲವನ್ನೂ ನೋಡ್ತಿದೀವಿ. ಆದರೆ, ಇಂದು ಸರ್ಕಾರ ಮತ್ತು ಸಿನಿರಂಗ ಒಂದೇ ಜಾಗದಲ್ಲಿ ಕಾಣಿಸಿಕೊಂಡಿದೆ. ಹೌದು, ಆಂಧ್ರದ ಸಿಎಂ ಜಗನ್ ಅವರನ್ನು ತೆಲುಗು ಸಿನಿರಂಗದ ಮುಖ್ಯಸ್ಥರಲ್ಲಿ ಒಬ್ಬರಾದ ಮೆಗಾ ಸ್ಟಾರ್ ನಟ ಚಿರಂಜೀವಿ ಭೇಟಿಯಾಗಿದ್ದರು. ಹೌದು, ನಟ ಚಿರಂಜೀವಿ ಅವರನ್ನು ಸ್ವತಃ ಸಿಎಂ ಜಗನ್ ಮೋಹನ್ ರೆಡ್ಡಿ ಅವರೇ ಊಟಕ್ಕೆ ಆಹ್ವಾನಿಸಿದರು. ಹಾಗಾಗಿ, ಚಿರಂಜೀವಿ ಅವರು ಇಂದು ಮಧ್ಯಾಹ್ನ ಅಮರಾವತಿಯ ತಾಡೆಪಲ್ಲಿಯಲ್ಲಿರುವ ಜಗನ್ ನಿವಾಸಕ್ಕೆ ಭೇಟಿ ನೀಡಿದ್ದರು.
ಸಿಎಂಗೆ ಚಿರಂಜೀವಿ ಮೊದಲು ಹೂಗುಚ್ಛೆ ನೀಡಿ ಗೌರವಿಸಿದರು. ಬಳಿಕ, ಇಬ್ಬರೂ ಸೇರಿ ಊಟ ಮಾಡಿದ್ದಾರೆಂದು ಹೇಳಲಾಗುತ್ತಿದೆ. ನಂತರ, ಸಿನಿಮಾ ಟಿಕೆಟ್ ಬೆಲೆ ಕಡಿಮೆಯಾಗಿರುವುದರಿಂದ ಆಗಿರುವ ಸಮಸ್ಯೆಗಳ್ನನು ಚಿರಂಜೀವಿ ಸಿಎಂಗೆ ತಿಳಿಸಿದ್ದಾರಂತೆ. ಇನ್ನು, ಟಿಕೆಟ್ ಬೆಲೆ ಕಡಿಮೆಯಾದ ಪರಣಾಮ ಬಹಳಷ್ಟು ಚಿತ್ರಮಂದಿರಗಳು ಕ್ಲೋಸ್ ಆಗಿರುವ ಬಗ್ಗೆಯೂ ಚರ್ಚೆಗಳು ನಡೆದಿವೆಯಂತೆ. ಲಾಕ್ಡೌನ್ ನಿಂದ ಈಗಾಗಲೇ ಲಾಸ್ ಅನುಭವಿಸುತ್ತಿರುವ ಚಿತ್ರರಂಗಕ್ಕೆ ಹೆಚ್ಚು ಲಾಸ್ ಮಾಡಬೇಡಿ ಎಂದು ನಟ ಸಿಎಂಗೆ ವಿನಂತಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ನಟ ಚಿರಂಜೀವಿ ಈ ವಿಚಾರದ ಕುರಿತು ಜಗನ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗಾದರೆ, ಸಿನಿಮಾ ಟಿಕೆಟ್ ಬೆಲೆ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುತ್ತಾ?, ಸಿಎಂ ಜಗನ್ ಅವರ ಮುಂದಿನ ನಡೆ ಏನು ಎಂದು ಕಾದು ನೋಡಬೇಕಿದೆ.
ಅಲ್ಲು ಅರ್ಜುನ್ ಮಗಳ ಜೊತೆ ಕುಣಿದ ಪೂಜಾ ಹೆಗ್ಡೆ! ಯಾವ ಹಾಡು ಗೊತ್ತಾ? ವಿಡಿಯೋ ವೈರಲ್…