More

    ‘ಎಂಬಿಎ’ ಚಿತ್ರದಲ್ಲಿ ಯುವ ಪೀಳಿಗೆಯ ತೊಳಲಾಟ, ನರಳಾಟದ ಪ್ರತಿಬಿಂಬ

    ಬೆಂಗಳೂರು: ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಸಿದ್ದಪಡಿಸಿರುವ ಹೊಸಬರ ’ಎಂಬಿಎ’ ಚಿತ್ರದ ಕತೆಯು ಕಾಲೇಜಿನಲ್ಲಿ ನಡೆಯುವ ಸೆಸ್ಪನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಮತ್ತು ಭಾವನೆಗಳನ್ನು ಹೊಂದಿದೆ. ಖ್ಯಾತ ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಎರಡು ವಿನೂತನ ಟ್ರೈಲರ್‌ಗಳನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

    ಇದನ್ನೂ ಓದಿ: ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ…; ಕಿಚ್ಚನ ಸಿನಿಪಯಣಕ್ಕೆ 25ರ ಹರೆಯ..

    ಎಂಬಿಎ ವ್ಯಾಸಾಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರು ಒಮ್ಮೆ ನೋಡಿದರೆ ಮನ ಮುಟ್ಟುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕಂತೆ. ಎಸ್.ನಾರಾಯಣ್ ಬಳಿ ಅನುಭವ ಪಡೆದುಕೊಂಡಿರುವ ಹೆಚ್‌ಪಿ, ರಚನೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಹಾಗೂ ಪಬ್ಲಿಕ್ ಪ್ರೊಡಕ್ಷನ್ ಐಎನ್‌ಸಿ ಮೂಲಕ ನಿರ್ಮಾಣ ಮಾಡಿದ್ದಾರೆ. ಪಿಯುಸಿ ಓದುವಾಗಲೇ ಒಂದು ಏಳೆಯನ್ನು ಬರೆದುಕೊಂಡಿದ್ದು ಈಗ ಅದು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.

    ‘ಎಂಬಿಎ’ ಚಿತ್ರದಲ್ಲಿ ಯುವ ಪೀಳಿಗೆಯ ತೊಳಲಾಟ, ನರಳಾಟದ ಪ್ರತಿಬಿಂಬ
    ಶೀರ್ಷಿಕೆಗೆ ಬೇರೆ ಏನಾದರೂ ಅರ್ಥ ನೀಡಬೇಕೆಂದು, ಅದಕ್ಕಾಗಿ 50 ಸಾವಿರ ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ’ಮೆಂಬರ್ ಆಫ್ ಬ್ಯಾಡ್ ಆಕ್ಟಿವಿಟೀಸ್’, ’ಮೈಸೂರು ಬಾಯ್ಸ್ ಅಸೋಸಿಯೇಶನ್’ ’ಮಂಡ್ಯಾ ಬಾಯ್ಸ್ ಅಸೋಸಿಯೇಶನ್’ ಹೀಗೆ ತರೆಹವಾರಿ ಹೆಸರುಗಳನ್ನು ತಿಳಿಸಿದ್ದಾರೆ. ಅಂತಿಮವಾಗಿ ಇದಕ್ಕೆ ತಕ್ಕ ಉತ್ತರವನ್ನು ಚಿತ್ರದಲ್ಲಿ ಹೇಳಲಾಗಿದೆ. ದೃಢ ಮನೋವೃತ್ತಿ ಹುಡುಗನಾಗಿ ಪುನೀತ್‌ಗೌಡ ಪಾತ್ರದ ಸಲುವಾಗಿ ವಿಶೇಷ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡು ನಟಿಸಿರುವುದು ಗೂಳಿಸೋಮ. ಅವರಿಗೆ ಜೋಡಿಯಾಗಿ ಕಾವ್ಯಗೌಡ, ಸೌಮ್ಯ ಶಾನ್‌ಭೋಗ್ ಮುಂತಾದವರು ಚಿತ್ರದಲ್ಲಿದ್ದಾರೆ.

    ಇದನ್ನೂ ಓದಿ: ಮತ್ತೆ ಶುರು ಸಖತ್; ಸದ್ಯದಲ್ಲೇ ಯುರೋಪ್​ಗೆ ಪ್ರಯಾಣ..

    ಹರ್ಷಿಕಾ ಗೋಡು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದರ್ಶನ್‌ ದೇವ್, ಸಂಕಲನ ಮರಿಸ್ವಾಮಿ.ಪಿ, ವಿಎಫ್‌ಎಕ್ಸ್ ದಯಾ ಅವರದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ಹಾಸನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ ಮೊದಲವಾರದಂದು ಏಕಕಾಲಕ್ಕೆ ಟಾಕೀಸ್ ಹಾಗೂ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts