ಲಖನೌ: ಉರಿದಾಳಿಯೊಂದಿಗೆ ಸತತ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ ಲಖನೌ ಸೂಪರ್ಜೈಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು, ಮುಂದಿನ 2 ಪಂದ್ಯಗಳನ್ನು ತಪ್ಪಿಸಿಕೊಳ್ಳುವ ನಿರೀಕ್ಷೆ ಇದೆ. ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಏಪ್ರಿಲ್ 14ರಂದು ಕೆಕೆಆರ್ ವಿರುದ್ಧ ಲಖನೌ ಆಡಲಿರುವ ಪಂದ್ಯಕ್ಕೂ ಮಯಾಂಕ್ ಬಹುತೇಕ ಅಲಭ್ಯರಾಗಿದ್ದಾರೆ. ಇನ್ನು ಏಪ್ರಿಲ್ 19ರಂದು ನಡೆಯಲಿರುವ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ 21 ವರ್ಷದ ಮಯಾಂಕ್ ಪೂರ್ಣ ಫಿಟ್ನೆಸ್ ಕಂಡುಕೊಳ್ಳುವ ಸಾಧ್ಯತೆ ಇದೆ.
“ಮಯಾಂಕ್ರನ್ನು ಎಲ್ಲ ಪಂದ್ಯದಲ್ಲಿ ಆಡಿಸುವುದು ನಮ್ಮ ಆಸೆ. ಆದರೆ ಫಿಟ್ನೆಸ್ ಸಮಸ್ಯೆಯಿಂದ ಅವರು ಇನ್ನೂ 2 ಪಂದ್ಯ ತಪ್ಪಿಸಿಕೊಳ್ಳಬಹುದು. ಆದರೆ ಸಾಧ್ಯವಾದಷ್ಟು ಬೇಗನೆ ಮರಳಿ ಕಣಕ್ಕಿಳಿಯಲಿದ್ದಾರೆ’ ಎಂದು ಎಲ್ಎಸ್ಜಿ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಗಂಟೆಗೆ 150 ಕಿಲೋಮೀಟರ್ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಿ ಗಮನಸೆಳೆದಿರುವ ಮಯಾಂಕ್ರನ್ನು ಮುಂಬರುವ ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೂ ಸೇರಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂಬ ವರದಿಗಳು ಈಗಾಗಲೆ ಹರಡಿವೆ.
ಆರ್ಸಿಬಿ ಬೌಲರ್ಗಳ ಬೆಂಡೆತ್ತಿದ್ದ ಇಶಾನ್-ಸೂರ್ಯಕುಮಾರ್; ಮುಂಬೈಗೆ 7 ವಿಕೆಟ್ಗಳ ಜಯ