ಮೀರತ್: ವಧು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಲ್ಯಾಣ ಮಂಟಪದ ಬುಕ್ಕಿಂಗ್ ರದ್ದು ಮಾಡಿರುವ ಅಮಾನುಷ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ.
ಘಟನೆ ಸಂಬಂಧ ಕಲ್ಯಾಣ ಮಂಟಪದ ಮಾಲೀಕ ರಾಯಿಸ್ ಅಬ್ಬಾಸಿಯನ್ನು ಪೊಲೀಸರು ಬಂಧಿಸಿದ್ದು. ಬುಕ್ ಮಾಡಿರುವ ಛತ್ರದಲ್ಲೇ ಮದುವೆ ಮಾಡಿಸಿಕೊಡುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಪ್ರಕರಣ ದಾಖಲು
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಖಾರ್ ಖೌಧ ಠಾಣಾಧಿಕಾರಿ ರುಚಿತಾ ಚೌಧರಿ ಸ್ಥಳೀಯ ನಿವಾಸಿ ಜೈದೀಪ್ ತಮ್ಮ ಸಹೋದರಿ ಮದುವೆಯನ್ನು ಏಪ್ರಿಲ್ 9ರಂದು ನಿಶ್ಚಯಿಸಿದ್ದರು. ಇದರ ಸಂಬಂಧ ರಾಯಿಸ್ ಅಬ್ಬಾಸಿ ಒಡೆತನದ ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದರು.
ಇದನ್ನೂ ಓದಿ: ಗದಗದಲ್ಲಿ ಸಿಡಿಲು ಬಡಿದು ಇಬ್ಬರು ಮೃತ್ಯು; ರೋಣದಲ್ಲಿ ಬಿತ್ತು ಆಲಿಕಲ್ಲು ಮಳೆ
ವಧು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿಮ್ಮ ಕಲ್ಯಾಣ ಮಂಟಪದ ಬುಕ್ಕಿಂಗ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ. ನೀವು ಬೇರೆ ಛತ್ರವನ್ನು ನೋಡಿಕೊಳ್ಳಿ ಎಂದು ಮಾಲೀಕರು ದೂರುದಾರರಿಗೆ ಕರೆ ಮಾಡಿ ಹೇಳಿದ್ದರು. ಈ ಸಂಬಂಧ ಛತ್ರದ ಮಾಲೀಕನ ವಿರುದ್ಧ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸತ್ಯಕ್ಕೆ ದೂರವಾದ ಮಾತು
ಈ ಕುರಿತು ಪ್ರತಿಕ್ರಿಯಿಸಿರುವ ಮಾಲೀಕ ರಾಯಿಸ್ ಅಬ್ಬಾಸಿ ತಮ್ಮ ಮೇಲೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಾವು ಬುಕ್ಕಿಂಗ್ ಕ್ಯಾನ್ಸಲ್ ಮಾಡಿಲ್ಲ ಮಾಂಸಹಾರವನ್ನು ಮಾಡಬೇಡಿ ಎಂದು ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.