More

    ಮಾವೋವಾದಿಗಳಿಂದ ಐಇಡಿ ಸ್ಪೋಟ: ಮೂವರು ಪೊಲೀಸ್ ಸಿಬ್ಬಂದಿ ಸಾವು

    ರಾಯ್​ಪುರ್: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಪೋಟಕ ಸ್ಪೋಟಿಸಿದ ಪರಿಣಾಮ ಚತ್ತೀಸ್​ಗಡ್​ದ ನಾರಾಯಣಪುರ ಜಿಲ್ಲಾ ರಿಸರ್ವ್ ಪೊಲೀಸ್​ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

    ಬಸ್ತಾರ್ ಅರಣ್ಯ ವಲಯದ ನಾರಾಯಣಪುರ ಜಿಲ್ಲೆಯ ಅಬ್ಜುಮಾಡ್​ ಎಂಬಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಗಿಸಿ ಸುಮಾರು 24 ಸಿಬ್ಬಂದಿ ಬಸ್​​ನಲ್ಲಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.

    ಘಟನೆಯಲ್ಲಿ 10 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಚತ್ತೀಸ್​ಗಡ್​ದ ಡಿಜಿಪಿ ಡಿಎಂ ಅವಸ್ತಿ ಅವರು ತಿಳಿಸಿದ್ದಾರೆ.

    ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಆ್ಯಪ್ ಬಳಸುತ್ತಿರುವ ಸಿಡಿ ಪ್ರಕರಣದ ಕಿಂಗ್‌ಪಿನ್‌ಗಳು!

    ಆಮೆಗಳ ದಿಕ್ಕು ತಪ್ಪಿಸುವ ವಿದ್ಯುತ್ ದೀಪಗಳು! ಎಲ್ಲ ಆಮೆಗಳು ಒಂದೇ ದಿನ ಮೊಟ್ಟೆ ಇಡೋದಕ್ಕೆ ಕಾರಣವಿದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts